Advertisement

ಮಧುಗಿರಿ: ಮಕ್ಕಳಿಲ್ಲದ ಖಿನ್ನತೆ; ನೇಣಿ ಬಿಗಿದುಕೊಂಡು ಯುವಕ ಆತ್ಮಹತ್ಯೆ

01:14 PM Jul 27, 2022 | Team Udayavani |

ಮಧುಗಿರಿ: ಮಕ್ಕಳಿಲ್ಲ ಎಂದು ಖಿನ್ನತೆಗೆ ಒಳಗಾಗಿದ್ದ ಯುವಕನೊಬ್ಬ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.

Advertisement

ತಾಲೂಕಿನ ಕಸಬಾ ಬಸವನಹಳ್ಳಿಯ ವಾಸಿ ಚೌಡಪ್ಪ (33) ಮೃತ ದುರ್ದೈವಿ.

ಈತನಿಗೆ ಮದುವೆಯಾಗಿ 8 ವರ್ಷವಾಗಿದ್ದು, ಮಕ್ಕಳಿರಲಿಲ್ಲ. ಆದರೂ ಕುಟುಂಬದಲ್ಲಿ ಸಂತೋಷವಾಗಿ ಇದ್ದನು. ಒಂದು ಗಾರ್ಮೆಂಟ್ಸ್ ಕಂಪನಿಗೆ ಕೆಲಸಕ್ಕೂ ಸೇರಿದ್ದು ಕೈ ತುಂಬಾ ದುಡಿಮೆಯಿದ್ದು ಸುಖ ಸಂಸಾರ ಇತ್ತು. ಆದರೆ ಬುಧವಾರ ಬೆಳಿಗ್ಗೆ ಚಹಾ ಸೇವಿಸಿ ಜಮೀನಿನ ಬಳಿ ಹೋಗಿ ಬರುವುದಾಗಿ ಹೋದವನು ತನ್ನ ಜಮೀನಿನ ಮಾವಿನ ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಮರಣೊತ್ತರ ಪರೀಕ್ಷೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಯಿತು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next