Advertisement

ನೀರು ಸರಬರಾಜು ಇಳಿಸುವ ವೇಳೆ ಸುಪರ್ ವೈಸರ್ ಮೇಲೆ ಬಿದ್ದ ಪೈಪ್: ಗಾಯಗೊಂಡ ಸುಪರ್ ವೈಸರ್ ಸಾವು

03:43 PM Jun 02, 2021 | Team Udayavani |

ಹುಬ್ಬಳ್ಳಿ: ನೀರು ಸರಬರಾಜು ಪೈಪ್ ಇಳಿಸುವ ಸಂದರ್ಭದಲ್ಲಿ ಸುಪರವೈಸರ್ ಮೇಲೆ ಪೈಪ್ ಬಿದ್ದು ಮೃತಪಟ್ಟ ಘಟನೆ ಬುಧವಾರ ಬೆಳಗ್ಗೆ ಇಲ್ಲಿನ ಎಪಿಎಂಸಿಯಲ್ಲಿ ನಡೆದಿದೆ.

Advertisement

ಘಟನೆಯಲ್ಲಿ ಇಲ್ಲಿನ ವಿಜಯನಗರ ಮಾಧವನಗರದ ವಿಜಯಾನಂದ ಹದ್ದಣ್ಣವರ (35) ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಮಂಗಳೂರು: ಮಹಿಳೆಗೆ ಕೊಲೆ ಬೆದರಿಕೆ : 7 ಜನ ಆರೋಪಿಗಳ ಬಂಧನ

ಎಲ್ ಆ್ಯಂಡ್ ಟಿ ಕಂಪನಿಯವರು ನೀರು ಸರಬರಾಜು ಪೈಪ್ ಲೈನ್ ಅಳವಡಿಸುತ್ತಿದ್ದು, ಲಾರಿಯಿಂದ ಪೈಪ್ ಗಳನ್ನು ಇಳಿಸುತ್ತಿದ್ದ ವೇಳೆ ಸುಪರ್ ವೈಸರ್ ಮೇಲೆ ಪೈಪ್ ಬಿದ್ದು ತೀವ್ರ ಗಾಯಗೊಂಡಿದ್ದರು. ಕಿಮ್ಸ್ ಗೆ ದಾಖಲಿಸಿದ್ದಾಗ ಚಿಕಿತ್ಸೆ ಫಲಿಸದೆ ಮೃತಪಟ್ಟರೆಂದು ಪೊಲೀಸರು ತಿಳಿಸಿದ್ದಾರೆ.

ಎಪಿಎಂಸಿ- ನವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next