Advertisement

ಹುಬ್ಬಳ್ಳಿ: ಮೃತ ದೇಹ ಒಯ್ಯುತ್ತಿದ್ದಾಗ ವಿದ್ಯುತ್ ತಂತಿ ತಗುಲಿ ಓರ್ವ ಸಾವು

09:30 PM May 07, 2021 | Team Udayavani |

ಹುಬ್ಬಳ್ಳಿ: ತಾಲೂಕಿನ ಶೆರೇವಾಡ ಗ್ರಾಮದಲ್ಲಿ ಮೃತಪಟ್ಟಿದ್ದ 80 ವರ್ಷದ ಅಜ್ಜಿಯ ಶವಯಾತ್ರೆ ಸಮಯದಲ್ಲಿ ವಿದ್ಯುತ್ ತಂತಿ ತಗುಲಿ ಓರ್ವ ಮೃತಪಟ್ಟು, ಮೂವರು ಗಾಯಗೊಂಡ ಘಟನೆ ಶುಕ್ರವಾರ ಸಂಜೆ ನಡೆದಿದೆ.

Advertisement

ಅವಘಡದಲ್ಲಿ ಶೆರೇವಾಡ ಗ್ರಾಮದ ಗುರುಸಿದ್ದಪ್ಪ ಯಲ್ಲಪ್ಪ ಕಲಗಿಡಿ (46) ಮೃತಪಟ್ಟಿದ್ದು, ಕರಿಯಪ್ಪ ಎಚ್. ತಹಶಿಲ್ದಾರ, ಅಡಿವೆಪ್ಪ. ವಿ. ಮತ್ತಿಗಟ್ಟಿ, ಶೇಖಪ್ಪ ಎಸ್. ಕುರಿ ಗಾಯಗೊಂಡಿದ್ದು, ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ.

ಈ ಕುರಿತು ಮೃತನ ಸಂಬಂಧಿಕರು ಹೆಸ್ಕಾಂ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದಾರೆ. ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ಕೊಟ್ಟು ಪರಿಶೀಲಿಸಿದರು.

ಇದನ್ನೂ ಓದಿ :ಸಂಸದ ತೇಜಸ್ವಿ ಸೂರ್ಯರಿಂದ ಸೌಹರ್ಧತೆಗೆ ಭಂಗ: ಮೊಯಿದಿನ್ ಬಾವ ಆರೋಪ

Advertisement

Udayavani is now on Telegram. Click here to join our channel and stay updated with the latest news.

Next