Advertisement

ಹಾವೇರಿ: ತಾನೇ ಹಚ್ಚಿದ ಬೆಂಕಿಯಲ್ಲಿ ಆಕಸ್ಮಿಕವಾಗಿ ಬಿದ್ದು ರೈತ ಸಾವು

07:20 PM Jan 19, 2022 | Team Udayavani |

ಗುತ್ತಲ (ಹಾವೇರಿ): ರೈತನೊರ್ವ ಬೆಂಕಿ ಆರಿಸಲು ಹೋಗಿ ಮೃತಪಟ್ಟಿರುವ ಘಟನೆ ಗುತ್ತಲ ಸಮೀಪದ ಬೆಳವಗಿ ಗ್ರಾಮದಲ್ಲಿ ಸಂಭವಿಸಿದೆ.

Advertisement

ಮೃತ ರೈತನನ್ನು ನಿಂಗಪ್ಪ ಹಾದಿಮನಿ (75) ಎಂದು ತಿಳಿದು ಬಂದಿದೆ.

ಮೃತ ರೈತನು ತನ್ನ ಸ್ವಂತ ಜಮೀನಿನಲ್ಲಿನ ಕಬ್ಬಿನ ಸೊಪ್ಪಿಗೆ ಬೆಂಕಿ ಹಚ್ಚಿ ಸುಡುತ್ತಿರುವಾಗ ನಿಯಂತ್ರಣಕ್ಕೆ ಬಾರದೇ ಪಕ್ಕದ ರೈತನ ಜಮೀನಿಗೆ ಬೆಂಕಿ ಹರಡುತ್ತಿರಲು, ಗಾಬರಿಯಿಂದ ಬೆಂಕಿ ನಂದಿಸಲು ಹೋಗಿದ್ದ ಸಂರ್ಭದಲ್ಲಿ ಆಕಸ್ಮಿಕವಾಗಿ ತಾನೇ ಹಚ್ಚಿದ ಬೆಂಕಿಯಲ್ಲಿ ಬಿದ್ದು ದೇಹದ ವಿವಿಧ ಭಾಗಗಳು ಸುಟ್ಟು ಹೋಗಿ ಮೃತಪಟ್ಟಿದ್ದಾರೆ ಎಂದು ಮೃತರ ಮಗ ಸಂತೋಷ ಪ್ರಕರಣ ದಾಖಲಿಸಿದ್ದಾರೆ.

ಗುತ್ತಲ ಪೊಲೀಸ್ ಠಾಣೆಯ ಪಿಎಸ್ಐ ಜಗದೀಶ್. ಜಿ ಹಾಗೂ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next