Advertisement

ಚಾಮರಾಜನಗರ: ಕೆಎಸ್‌ಆರ್‌ಟಿಸಿ ಬಸ್ ಮತ್ತು ಬೈಕ್ ಡಿಕ್ಕಿ ಮೂವರು ಸಾವು

09:08 PM Nov 25, 2021 | Team Udayavani |

ಚಾಮರಾಜನಗರ: ರೈಲ್ವೆ ಮೇಲ್ಸೇತುವೆ ಮೇಲೆ ಹೋಗುತ್ತಿದ್ದ ಬೈಕೊಂದು ಎದುರು ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಮುಖಾಮುಖಿ ಡಿಕ್ಕಿಯಾಗಿ ದಂಪತಿ ಸೇರಿ ಮೂವರು ಮೃತಪಟ್ಟಿರುವ ಘಟನೆ  ಗುರುವಾರ ಸಂಜೆ ನಗರದ ಹೊರ ವಲಯದ ಮರಿಯಾಲ ಬ್ರಿಡ್‌ಜ್ ಮೇಲೆ ನಡೆದಿದೆ.

Advertisement

ಚೆನ್ನಿಪುರ ಮೋಳೆ ಗ್ರಾಮದ ಅಶೋಕ (26), ಹೆಗ್ಗೊಠಾರ ಗ್ರಾಮದವರಾದ ದಂಪತಿ ಶಾಂತಮಲ್ಲಪ್ಪ (55) ಹಾಗೂ ಅನಿತಾ (45) ಮೃತಪಟ್ಟವರು.

ಸಂಜೆ 6 ಗಂಟೆ ಸಮಯದಲ್ಲಿ ಬೈಕ್ ನಲ್ಲಿ ಮೂವರು ಹೆಗ್ಗೊಠಾರ ಕಡೆ ಹೋಗುತ್ತಿದ್ದರು. ಮರಿಯಾಲದ ಬಳಿ ಇರುವ ರೈಲ್ವೆ ಮೇಲ್ಸೇತುವೆ ಮೇಲೆ ಹೋಗುತ್ತಿದ್ದಾಗ, ಮೈಸೂರಿನಿಂದ ನಗರಕ್ಕೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಗೆ ಡಿಕ್ಕಿಯಾಗಿದೆ. ಅಶೋಕ ಬೈಕ್ ಚಲಾಯಿಸುತ್ತಿದ್ದ. ಶಾಂತಮಲ್ಲಪ್ಪ ಮತ್ತು ಅನಿತಾ ಹಿಂದೆ ಕುಳಿತಿದ್ದರು. ಬೈಕ್‌ನಿಂದ ಬಿದ್ದು ಮೂವರೂ ಮೃತಪಟ್ಟಿದ್ದಾರೆ. ಈ ರೈಲ್ವೇ ಮೇಲ್ಸೇತುವೆ  ಇಕ್ಕಟ್ಟಾಗಿರುವುದು ಮುಖಾಮುಖಿ ಡಿಕ್ಕಿಗೆ ಕಾರಣವಿರಬಹುದೆಂದು ಪೊಲೀಸರು ತಿಳಿಸಿದ್ದಾರೆ.

ಸಂಚಾರ ಠಾಣೆಯ ಇನ್‌ಸ್ಪೆಕ್ಟರ್ ಮಹೇಶ್, ಎಸ್‌ಐ ನಂದೀಶ್ ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್,  ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣೆಕೊಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಬುಧವಾರ ಸಂಜೆ ಇದೇ ರಸ್ತೆಯಲ್ಲಿ, ನಗರದ ಸಂಚಾರ ಠಾಣೆ ವ್ಯಾಪ್ತಿಯಲ್ಲೇ ಬದನಗುಪ್ಪೆ ಬಳಿ, ಕಾರು ಬೈಕ್ ನಡುವೆ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದರು. ಈಗ ಇದೇ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿ ಮೂವರು ಮೃತಪಟ್ಟಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next