Advertisement

Tragic: ತೀರ್ಥವಾರಿ ಉತ್ಸವದ ವೇಳೆ ದುರಂತ; ದೇವಸ್ಥಾನದ ಕೊಳದಲ್ಲಿ ಮುಳುಗಿ ಐವರು ಮೃತ್ಯು

02:21 PM Apr 05, 2023 | Team Udayavani |

ಚೆನ್ನೈ: ದೇವಸ್ಥಾನದ ಕೊಳದಲ್ಲಿ ಮುಳುಗಿ ಐವರು ಯುವಕರು ಮೃತಪಟ್ಟಿರುವ ಘಟನೆ ದಕ್ಷಿಣ ಚೆನ್ನೈನ ಉಪನಗರವಾದ ಕೀಲ್ಕತ್ತಲೈ ಬಳಿಯ ಮೂವರ್ ಸಂಪೇಟ್ ನಲ್ಲಿ ಬುಧವಾರ ಮುಂಜಾನೆ ( ಏ.5 ರಂದು) ನಡೆದಿರುವುದು ವರದಿಯಾಗಿದೆ.

Advertisement

ಧರ್ಮಲಿಂಗೇಶ್ವರ ದೇವಸ್ಥಾನದ ತೀರ್ಥವಾರಿ ಉತ್ಸವದ ವೇಳೆ ದುರಂತ ಸಂಭವಿಸಿದೆ. ಮಡಿಪಾಕ್ಕಂನ ರಾಘವನ್, ಕೀಲ್ಕತ್ತಲೈನ ಯೋಗೇಶ್ವರನ್ ಮತ್ತು ನಂಗನಲ್ಲೂರಿನ ವನೇಶ್, ರಾಘವನ್ ಮತ್ತು ಆರ್.ಸೂರ್ಯ ಮೃತ ಯುವಕರು.

ಆರ್ಚಕರು ಸೇರಿದಂತೆ ಒಟ್ಟು 25 ಮಂದಿ ಕೊಳದಲ್ಲಿ ಸುತ್ತಾಗಿ ನಿಂತು ತೀರ್ಥವಾರಿ ಉತ್ಸವದ ತಯಾರಿಯಲ್ಲಿರುವಾಗ ಓರ್ವ ಯುವಕ ಕೊಳದಲ್ಲಿ ಮುಳುಗಿದ್ದಾನೆ. ಮುಳಗುತ್ತಿದ್ದವನನ್ನು ರಕ್ಷಣೆ ಮಾಡಲು ಉಳಿದ ನಾಲ್ವರು ಹೋಗಿದ್ದಾರೆ. ಆದರೆ ಐವರು ನೀರಿನಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾರೆ.

ಸದ್ಯ ಮೃತದೇಹವನ್ನು ಹೊರ ತೆಗದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next