Advertisement

ಟ್ರಾಫಿಕ್‌ ಜಾಮ್‌: ಬೈಕ್‌ ಏರಿದ ಸಚಿವ  ಖಾದರ್‌

03:45 AM Jan 28, 2017 | |

ಬೆಳಗಾವಿ: ಮುಖ್ಯಮಂತ್ರಿ ಹಾಗೂ ಮಂತ್ರಿಗಳು ಬಂದಾಗ ಸಂಚಾರ ಅಸ್ತವ್ಯಸ್ತವಾಗಿ ಪ್ರಯಾಣಿಕರು ಪರದಾಡುವುದು ಹೊಸದೇನಲ್ಲ. ಆದರೆ, ಸ್ವತಃ ಸಚಿವರಿಗೇ ಈ ಸ್ಥಿತಿ ಒದಗಿದರೆ?

Advertisement

ಶುಕ್ರವಾರ ನಗರಕ್ಕೆ ಮುಖ್ಯಮಂತ್ರಿಗಳ ಭೇಟಿಗೂ ಮುನ್ನ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಯು.ಟಿ. ಖಾದರ್‌ ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿದ್ದರು. ಬಳಿಕ ಕೆಲ ಕಾಲ ಸಂಚಾರ ದಟ್ಟಣೆ ನಿಭಾಯಿಸಲು ಯತ್ನಿಸಿದರು. ಆದರೆ ಅದು ಸಾಧ್ಯವಾಗದಿದ್ದಾಗ ಅಪರಿಚಿತರೊಬ್ಬರ ಬೈಕ್‌ ಏರಿ ವಿಮಾನ ನಿಲ್ದಾಣ ತಲುಪಿದರು.

ಸಿಎಂ ಸಿದ್ದರಾಮಯ್ಯ ಬೈಲಹೊಂಗಲದಲ್ಲಿ ನಡೆಯುತ್ತಿರುವ ಕೃಷಿ ಮೇಳದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ಬೆಳಗಾವಿಗೆ ಬಂದಿದ್ದರು. ಈ ವೇಳೆ ಸಾಂಬ್ರಾ ವಿಮಾನ ನಿಲ್ದಾಣದಿಂದ ರಸ್ತೆ ಮೂಲಕ ಬೈಲಹೊಂಗಲಕ್ಕೆ ಸಿಎಂ ತೆರಳುವಾಗ ಪೊಲೀಸರು ಸಾಂಬ್ರಾ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಿದ್ದರು.

ಇದೇ ವೇಳೆ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಹೊರಡುವ ವಿಮಾನವೇರಲು ಹುಬ್ಬಳ್ಳಿ ಕಡೆಯಿಂದ ಬರುತ್ತಿದ್ದ ಸಚಿವ ಯು.ಟಿ. ಖಾದರ್‌, ಬೆಳಗಾವಿ ಸಮೀಪ ವಾಹನಗಳ ಸಾಲಿನಲ್ಲಿ ಸಿಲುಕಿದ್ದರು. ಬಳಿಕ ಬೈಕ್‌ ಸವಾರನಿಂದ ಡ್ರಾಪ್‌ ಪಡೆದು ವಿಮಾನ ನಿಲ್ದಾಣ ತಲುಪಿ ಬೆಂಗಳೂರಿಗೆ ತೆರಳಿದರು.

Advertisement

Udayavani is now on Telegram. Click here to join our channel and stay updated with the latest news.

Next