Advertisement

ಕಟೀಲಿಗೆ ತೆರಳುವ ಭಕ್ತರಿಗೆ ಇಂದು ಬಸ್‌ಗಳಲ್ಲಿ ಉಚಿತ ಪ್ರಯಾಣ

01:39 AM Feb 01, 2020 | mahesh |

ಮಂಗಳೂರು: ಕಟೀಲು ದೇವಿಗೆ ಬ್ರಹ್ಮ ಕಲಶೋತ್ಸವದ ನಿಮಿತ್ತ ಫೆ.1ರಂದು ನಡೆಯಲಿರುವ ನಾಗಮಂಡಲ ಉತ್ಸವಕ್ಕೆ ಮಂಗಳೂರು ಸಹಿತ ವಿವಿಧ ಭಾಗಗಳಿಂದ ನೇರವಾಗಿ ಕಟೀಲಿಗೆ ತೆರಳುವ ಸಿಟಿ-ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರಿಗೆ ಉಚಿತ ಪ್ರಯಾಣ ಕಲ್ಪಿಸಲಾಗಿದೆ.

Advertisement

ಬೆಳಗ್ಗೆ 6ರಿಂದ ಮರುದಿನ ಬೆಳಗ್ಗೆ 4ರ ವರೆಗೆ
ಶನಿವಾರದಂದು ಬೆಳಗ್ಗೆ 6 ಗಂಟೆಯಿಂದ ಮರುದಿನ ಬೆಳಗ್ಗಿನ ಜಾವ 4 ಗಂಟೆಯವರೆಗೆ ಮಂಗಳೂರು, ಸುರತ್ಕಲ್‌, ಹಳೆಯಂಗಡಿ, ಬಿ.ಸಿ. ರೋಡ್‌, ಮೂಲ್ಕಿ, ಬೆಳ್ಮಣ್‌, ಕಾರ್ಕಳ ಸೇರಿದಂತೆ ಕೆಲವೊಂದು ಪ್ರದೇಶದಿಂದ ಒಟ್ಟು 100 ಬಸ್‌ಗಳು ಸರಾಸರಿ 5 ಟ್ರಿಪ್‌ಗ್ಳಂತೆ ಕಟೀಲಿಗೆ ಸಂಚರಿಸಲಿವೆ.

ಈ ಎಲ್ಲ ಬಸ್‌ಗಳಲ್ಲಿ ಕಟೀಲು ಕ್ಷೇತ್ರಕ್ಕೆ ತೆರಳುವ ಪ್ರಯಾಣಿಕರಿಗೆ ಉಚಿತ ಪ್ರಯಾಣ ಕಲ್ಪಿಸಲಾಗಿದೆ ಎಂದು ಕಿನ್ನಿಗೋಳಿ-ಮುಲ್ಕಿ ವಲಯದ ಬಸ್‌ ಮಾಲಕರ ಸಂಘದ ಅಧ್ಯಕ್ಷ ದುರ್ಗಾಪ್ರಸಾದ ಹೆಗ್ಡೆ ಅವರು “ಉದಯವಾಣಿ’ಗೆ ತಿಳಿಸಿದ್ದಾರೆ..

Advertisement

Udayavani is now on Telegram. Click here to join our channel and stay updated with the latest news.

Next