Advertisement

ಪ್ರವಾಸಿ ಭಾರತೀಯ ದಿವಸ್‌

12:30 AM Jan 30, 2019 | Team Udayavani |

ಬೆಂಗಳೂರು: “ಟುರ್ರಿನೂ ಅಡ್ವೆಟೈಸಿಂಗ್‌’ ನ ಮುಖ್ಯಸ್ಥೆ ಡಾ, ಜುಲೇಖಾ ದಾವೂದ್‌ ಅವರು “ಪ್ರವಾಸಿ ಭಾರತೀಯ ಸಮ್ಮಾನ್‌’ಗೆ
ಭಾಜನರಾಗಿದ್ದಾರೆ. ಈಚೆಗೆ ವಾರಣಾಸಿಯಲ್ಲಿ ಸಮಾರೋಪ  ಗೊಂಡ ಪ್ರವಾಸಿ ಭಾರತೀಯ ದಿವಸ್‌ನಲ್ಲಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಡಾ.ಜುಲೇಖಾ ದಾವೂದ್‌ ಅವರಿಗೆ ಪ್ರವಾಸಿ ಭಾರತೀಯ ಸಮ್ಮಾನ್‌ ನೀಡಿ ಗೌರವಿಸಿದರು. 2002ರಲ್ಲಿ ಯುಎಇನಲ್ಲಿ ಸ್ಥಾಪನೆಗೊಂಡ ಟುರ್ರಿನೂ ಅಡ್ವೆ„ರ್ಟೆಸಿಂಗ್‌ 17 ವರ್ಷಗಳಲ್ಲಿ ತನ್ನ ವ್ಯಾಪ್ತಿಯನ್ನು ದುಬೈ, ಶಾರ್ಜಾ ಹಾಗೂ
ಭಾರತದಲ್ಲಿ ವಿಸ್ತರಿಸಿಕೊಂಡಿದೆ. ಮಾರುಕಟ್ಟೆಯಾದ್ಯಂತ ಬ್ರಾಂಡ್‌ಗಳೊಂದಿಗೆ ಕೆಲಸ ಮಾಡುವ ಅನುಭವ ಹೊಂದಿರುವ
ಟುರ್ರಿನೂ ಪ್ಯಾನಸೊನಿಕ್‌, ಕ್ಯಾನಾನ್‌, ಹೈಯರ್‌, ಜಿಯೋಜಿಟ್‌, ಮನೋರಮಾ ನ್ಯೂಸ್‌, ಮಾಝಾವಿಲ್‌ ಮನೋರಮಾ,
ರಮಾಡಾ, ಭೀಮಾ ಹಾಗೂ ಪೊತೀಸ್‌ ಗ್ರಾಹಕರನ್ನು ನಿರ್ವಹಿಸುತ್ತಿದೆ.

Advertisement

“ಕನ್ಸ್‌ಲ್ಟಂಟ್‌ ರಿವಿವ್‌ ಮ್ಯಾಗಜೀನ್‌’ ಪ್ರಕಾರ ಟುರ್ರಿನೂ ಅಡ್ವೆ„ರ್ಟೆಸಿಂಗ್‌ ಭಾರತದ 20 ಪ್ರಮುಖ ಹಾಗೂ ವಿಶ್ವಾಸಾರ್ಹ
ಅಡ್ವೆ„ಟೈìಸಿಂಗ್‌ ಬ್ರಾಂಡ್‌ಗಳನ್ನು ಒಳಗೊಂಡಿದೆ. ಅಲ್ಲದೇ 80ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಗೆದ್ದಿದೆ. ಅಲ್ಲದೇ ವರ್ಷದ “ಹೆಲ್ತ್‌ಕೇರ್‌ ಏಜೆನ್ಸಿ’ಗೂ ಆಯ್ಕೆಯಾಗಿದೆ. ಡಾ.ಜುಲೇಖಾ ದಾವೂದ್‌ “ಜುಲೇಖಾ ಹೆಲ್ತ್‌ಕೇರ್‌ ಗ್ರೂಪ್‌’ನ ಸಂಸ್ಥಾಪಕ ಅಧ್ಯಕ್ಷರೂ ಆಗಿದ್ದಾರೆ. ಸುಸಜ್ಜಿತ ಮತ್ತು ಸಮಗ್ರ ಆರೋಗ್ಯ ಸೇವೆಗಳನ್ನು ಒದಗಿಸುವ ಜುಲೇಖಾ ಹೆಲ್ತ್‌ಕೇರ್‌ ಗ್ರೂಪ್‌ ಯುಎಇ, ಭಾರತದಲ್ಲಿ ಆಸ್ಪತ್ರೆಗಳನ್ನು
ಹೊಂದಿದ್ದು 4 ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಕಲ್ಪಿಸಿದೆ. ಜುಲೇಖಾ ಅವರು ಯುಎಇ ಸರ್ಕಾರದಿಂದ ಹಲವು 
ಪುರಸ್ಕಾರಗಳನ್ನು ಪಡೆದುಕೊಂಡಿದ್ದಾರೆ. ಅಲ್ಲದೆ, ಜಾಗತಿಕ ಮಟ್ಟದಲ್ಲಿ 20 ಭಾರತೀಯ ಪ್ರಭಾವಿ ಮಹಿಳೆಯರಲ್ಲಿ
ಜುಲೇಖಾ ಒಬ್ಬರಾಗಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next