Advertisement

ಸೆಲ್ಫಿಗಿಂತ ಪ್ರಾಣ ಮುಖ್ಯ: ಚಾರ್ಮಾಡಿಯ ಜಾರುವ ಬಂಡೆಗಳ ಮೇಲೆ ಪ್ರವಾಸಿಗರ ಸರ್ಕಸ್!

11:23 AM Jun 28, 2021 | Team Udayavani |

ಚಿಕ್ಕಮಗಳೂರು: ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಮಳೆಗಾಲದಲ್ಲಿ ಹಲವಾರು ಝರಿಗಳು ಪ್ರಯಾಣಿಕರಿಗೆ ಮುದ ನೀಡುತ್ತದೆ. ಬಹಳಷ್ಟು ಮಂದಿ ಪ್ರಯಾಣಿಕರು ವಾಹನ ನಿಲ್ಲಿಸಿ ಈ ಜಲಪಾತಗಳ ಸೊಬಗನ್ನು ಸವಿಯುತ್ತಾರೆ. ಆದರೆ ಕೆಲವರು ಮಾತ್ರ ಈ ಜಾರುವ ಬಂಡೆಗಳ ಮೇಲೆ ಹತ್ತಿ ಮೋಜು ಮಸ್ತಿ ಮಾಡುತ್ತಿದ್ದಾರೆ.

Advertisement

ಪ್ರವಾಸಿಗರು ಕೆಲವು ನೀರು ಬೀಳುವ ಸ್ಥಳಕ್ಕೆ ಹೋಗಲು ಮುಂದಾಗುತ್ತಿರುವ ಘಟನೆಗಳು ನಡೆಯುತ್ತಿದೆ. ಈ ಹಿಂದೆ ಇದೇ ಜಾಗದಲ್ಲಿ ಮಸ್ತಿ ಮಾಡಲು ಹೋಗೊ ಜಾರಿ ಬಿದ್ದು ಕೈ-ಕಾಲು ಮುರಿದುಕೊಂಡಿದ್ದಾರೆ. ಸೆಲ್ಫಿ ಕ್ಲಿಕ್ಕಿಸಲು ಹೋಗಿ ಪ್ರಾಣ ಕಳೆದುಕೊಂಡವರು ಇದ್ದಾರೆ. ಇಷ್ಟೆಲ್ಲಾ ಆಗಿದ್ದರೂ ಪ್ರವಾಸಿಗರು ಮತ್ತೆ ಮತ್ತೆ ಜಾರು ಬಂಡೆಗಳ ಮೇಲೆ ಕಾಲಿಡುತ್ತಿದ್ದಾರೆ.

ಇದನ್ನೂ ಓದಿ:ಲಸಿಕೆ ಪಡೆಯಲು ಬಂದವರು 500 ಮಂದಿ, ಕೊಟ್ಟ ಟೋಕನ್ ಕೇವಲ 200: ರೊಚ್ಚಿಗೆದ್ದ ಜನರು

ನಿರಂತರ ನೀರು ಹರಿಯುವ ಕಾರಣ ಈ ಬಂಡೆಗಳು ಜಾರುತ್ತದೆ . ಬಂಡೆಗಳ ಮೇಲೆ ಹತ್ತಬಾರದೆಂದು ಸರ್ಕಾರದ ಆದೇಶವಿದ್ದರೂ ಪ್ರವಾಸಿಗರ ಮೋಜು-ಮಸ್ತಿಗೆ ಕಡಿವಾಣ ಹಾಕುವವರಿಲ್ಲ ಎನ್ನುವಂತಾಗಿದೆ.

Advertisement

ದುರ್ಘಟನೆ ನಡೆಯುವ ಮುನ್ನ ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳು ಎಚ್ಚೆತ್ತು, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next