Advertisement

ಪ್ರವಾಸೋದ್ಯಮ ಅಭಿವೃದ್ಧಿ ನಿರೀಕ್ಷೆಯಲ್ಲಿ ಕಿಷ್ಕಿಂದಾ

04:18 PM Aug 01, 2022 | Team Udayavani |

ಗಂಗಾವತಿ: ವಿಶ್ವವಿಖ್ಯಾತ ಕಿಷ್ಕಿಂದಾ ಅಂಜನಾದ್ರಿಗೆ ಸಿಎಂ ಬಸವರಾಜ ಬೊಮ್ಮಾಯಿ ಮೊದಲ ಬಾರಿಗೆ ಆಗಮಿಸುತ್ತಿದ್ದು, ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುತ್ತಿರುವುದು ಕ್ಷೇತ್ರದ ಜನರಲ್ಲಿ ಆಶಯ ಹೆಚ್ಚಿಸಿದ್ದು, ಆನೆಗೊಂದಿ ಸುತ್ತಲಿನ ಪ್ರದೇಶದ ಪ್ರವಾಸೋದ್ಯಮದ ನಿರೀಕ್ಷೆ ಮೂಡಿದೆ. ಈಗಾಗಲೇ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ 20 ಕೋಟಿ ಅನುದಾನ ನೀಡಿದ್ದು, ಪ್ರಸ್ತುತ ಸರ್ಕಾರ 100 ಕೋಟಿ ಅನುದಾನವನ್ನೂ ಘೋಷಿಸಿದೆ.

Advertisement

ಆನೆಗೊಂದಿ ಭಾಗ ಏಳು ಗುಡ್ಡಗಳ ಪ್ರದೇಶ ವಾಗಿದ್ದು, ಇಲ್ಲಿ 14 ಸಾವಿರ ಎಕರೆ ಕೃಷಿ ಭೂಮಿ ಯಿದೆ. ಇಲ್ಲಿಯ ಶೇ.20ರಷ್ಟು ನಿವಾಸಿಗಳು 1-5 ಎಕರೆ ಭೂಮಿ ಹೊಂದಿದ್ದಾರೆ. ಶೇ. 80 ಜನರು ಕೂಲಿ ಕೆಲಸ ಮತ್ತು ಪ್ರವಾಸೋದ್ಯಮವನ್ನೇ ಜೀವನ ಸಾಗಿಸುತ್ತಿದ್ದಾರೆ. ಈ ಮಧ್ಯೆ ಹಂಪಿ ಪ್ರಾ ಧಿಕಾರದ ಕೆಲ ನಿಯಮಗಳಿಂದ ಇಲ್ಲಿ ಸಣ್ಣಪುಟ್ಟ ಹೊಟೇಲ್‌ ಹಾಗೂ ವ್ಯವಹಾರ ನಿಂತಿವೆ. ಇಲ್ಲಿನ ಜನರ ಶ್ರೇಯೋಭಿವೃದ್ಧಿಗೆ ಸರಕಾರ ಕೆಲವು ನಿಯಮಗಳಿಗೆ ತಿದ್ದುಪಡಿಗೆ ಒತ್ತು ನೀಡಬೇಕಿದೆ. ಈ ಹಿಂದೆ ಸಿಎಂ ಅವರು ಹಂಪಿ ಅಭಿವೃದ್ಧಿ ಪ್ರಾಧಿಕಾರದಿಂದ ಆನೆಗೊಂದಿ ಭಾಗದ 15 ಗ್ರಾಮಗಳನ್ನು ಪ್ರತ್ಯೇಕ ಅಂಜನಾದ್ರಿ ಅಭಿವೃದ್ಧಿ ಪ್ರಾಧಿಕಾರ ರಚಿಸುವ ಭರವಸೆಗೆ ಒತ್ತು ನೀಡುವ ಮೂಲಕ ಪ್ರವಾಸೋದ್ಯಮಕ್ಕೆ ವೇಗ ನೀಡಬೇಕಿದೆ. ಅಂಜನಾದ್ರಿ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ನಿಗಾ ವಹಿಸಬೇಕಿದೆ.

ಸರ್ಕಾರ ಆಗೊಮ್ಮೆ ಈಗೊಮ್ಮೆ ಆನೆಗೊಂದಿ ಉತ್ಸವ ಮಾಡುತ್ತಿದ್ದು ಶಾಸಕ ಪರಣ್ಣ ಮುನವಳ್ಳಿ ಅವರ ಅವ ಧಿಯಲ್ಲಿ ಎರಡು ಬಾರಿ ಆನೆಗೊಂದಿ ಉತ್ಸವ ಮಾಡಿದ್ದು ಬಿಟ್ಟರೆ ಉಳಿದ ಅವ ಧಿಯಲ್ಲಿ ಉತ್ಸವ ನಡೆಸಿಲ್ಲ. ಬಜೆಟ್‌ನಲ್ಲಿ ಹಣ ಮೀಸಲಿಟ್ಟು ಪ್ರತಿವರ್ಷ ಉತ್ಸವವನ್ನು ಸಂಭ್ರಮದಿಂದ ನಡೆಸಬೇಕಿದೆ. ವಿರೂಪಾಪುರಗಡ್ಡಿ ನಿರಾಶ್ರಿತರಿಗೆ ಪುನರ್ವಸತಿ, ಹಿಟ್ನಾಳದಿಂದ-ಗಂಗಾವತಿವರೆಗೆ ಚತುಷ್ಪಥ ರಸ್ತೆ ನಿರ್ಮಾಣದಲ್ಲಿ ಮನೆ ಗದ್ದೆ ಕಳೆದುಕೊಳ್ಳುವವರಿಗೆ ಪುನರ್ವಸತಿ ಕಲ್ಪಿಸುವುದು. ಇಲ್ಲಿಯ ಬೆಟ್ಟಗುಡ್ಡಗಳನ್ನು ನೈಸರ್ಗಿಕವಾಗಿ ಉಳಿಸಿಕೊಂಡು ಅಭಿವೃದ್ಧಿ ಮಾಡಬೇಕೆಂದು ಜನತೆ ಒತ್ತಾಯಿಸಿದ್ದಾರೆ.

ಬಿಎಸ್‌ವೈ ಸೇರಿ ಸಿಎಂ ಬೊಮ್ಮಾಯಿ ಅವರು ಅಂಜನಾದ್ರಿ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದು, ಇಲ್ಲಿಯವರೆಗೂ 120 ಕೋಟಿ ಅನುದಾನ ಮಂಜೂರು ಮಾಡಿದ್ದಾರೆ. ಕಿಷ್ಕಿಂದೆಯಲ್ಲಿ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಅಭಿವೃದ್ಧಿ ಕೈಗೊಳ್ಳಲಾಗುವುದು. ಹೊಸ ಮಾಸ್ಟರ್‌ ಪ್ಲಾನ್‌ನಲ್ಲಿ ಸ್ಥಳೀಯರ ಪಾಲ್ಗೊಳ್ಳುವಿಕೆಯ ಕುರಿತಂತೆ ನಿಯಮಗಳನ್ನು ಅಳವಡಿಸಿದೆ. ರೊಪ್‌ವೇ, ವಿಜಯನಗರ ಕಾಲುವೆಗಳ ಶಾಶ್ವತ ದುರಸ್ತಿ, ಅಂಜನಾದ್ರಿಗೆ ಚತುಷ್ಪಥ ರಸ್ತೆ ಸೇರಿ 61 ಎಕರೆ ಸ್ವಾಧೀನಕ್ಕೆ ಕ್ರಮ ಕೈಗೊಂಡಿದೆ. ಈಗ ಸಿಎಂ ಸ್ಥಳೀಯರು, ರೈತರು ಹಾಗೂ ಜನಪ್ರತಿನಿಧಿಗಳ ಜತೆ ಚರ್ಚಿಸಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಯೋಜನೆ ರೂಪಿಸಲಿದ್ದಾರೆ. –ಪರಣ್ಣ ಮುನವಳ್ಳಿ, ಗಂಗಾವತಿ ಶಾಸಕ

-ಕೆ.ನಿಂಗಜ್ಜ

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next