Advertisement

ಧಾರಾಕಾರ ಮಳೆ: ಮೂವರ ಸಾವು; 29 ಸೇತುವೆ ಮುಳುಗಡೆ

10:44 PM Sep 12, 2022 | Team Udayavani |

ಹುಬ್ಬಳ್ಳಿ: ಧಾರಾಕಾರ ಮಳೆಗೆ ಉತ್ತರ ಕರ್ನಾಟಕದ ಕೃಷ್ಣಾ, ಮಲಪ್ರಭಾ, ಘಟಪ್ರಭಾ, ವೇದಗಂಗಾ, ದೂಧ್‌ಗಂಗಾ, ಹಿರಣ್ಯಕೇಶಿ ನದಿಗಳು ಉಕ್ಕಿ ಹರಿಯುತ್ತಿದೆ.

Advertisement

ಬೆಳಗಾವಿಯಲ್ಲಿ 17, ಬಾಗಲಕೋಟೆ ಜಿಲ್ಲೆಯ 12 ಸಹಿತ ಒಟ್ಟು 29 ಸೇತುವೆಗಳು ಮುಳುಗಡೆಯಾಗಿವೆ. ಮೂವರು ಮೃತಪಟ್ಟಿದ್ದು, ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಕ್ಯಾದಗಿ ಗ್ರಾಪಂ ವ್ಯಾಪ್ತಿಯಲ್ಲಿ ಮನೆ ಗೋಡೆ ಕುಸಿದು ಚಂದ್ರಶೇಖರ ಹರಿಜನ (21) ಮೃತಪಟ್ಟಿದ್ದಾನೆ. ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲವಿ ಜಲಾಶಯದ ಬಳಿ ಈಜಲು ತೆರಳಿದ್ದ ಏಳು ಜನ ಯುವಕರ ಪೈಕಿ ಕೊಟ್ಟೂರಿನ ಚರಣ್‌ (33) ಹಾಗೂ ಉಜ್ಜಿನಿಯ ಹಾಲೇಶ್‌(34) ಮೃತಪಟ್ಟಿದ್ದಾರೆ.

ಹೊಸಪೇಟೆಯ ಟಿಬಿ ಡ್ಯಾಂ ವೀಕ್ಷಿಸಿ ಮಾಲವಿ ಜಲಾಶಯ ನೋಡಲು ಬಂದಿದ್ದರು. ಅದರಲ್ಲಿ ಇಬ್ಬರು ಈಜಾಡಲು ತೆರಳಿದ್ದಾಗ ಏಕಾಏಕಿ ನೀರಿ ಪ್ರಮಾಣ ಹೆಚ್ಚಾಗಿದ್ದರಿಂದ ಮೃತಪಟ್ಟಿದ್ದಾರೆ. ಶೋಧ ಕಾರ್ಯ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next