Advertisement

Daily horoscope: ಉದ್ಯೋಗಾಸಕ್ತರಿಗೆ  ಹೊಸ ಅವಕಾಶಗಳು ಗೋಚರ

06:36 PM Feb 18, 2024 | Team Udayavani |

ಮೇಷ: ಅರಿವಿಗೆ ಬಂದಿರುವ  ವಿಷಯಗಳಲ್ಲಿ ಪ್ರೌಢಿಮೆ ಹೊಂದುವ ಪ್ರಯತ್ನ. ಉದ್ಯೋಗ ಸ್ಥಾನದಲ್ಲಿ  ಎಳೆಯರಿಗೆ  ಮಾರ್ಗದರ್ಶನ ಮುಂದುವರಿಕೆ.   ಪೂರಕ ಆದಾಯದ  ಮೂಲ ಅನ್ವೇಷಣೆ. ವಸ್ತ್ರೋದ್ಯಮ ಸಂಬಂಧಿ ವ್ಯವಹಾರದಲ್ಲಿ ಯಶಸ್ಸು.

Advertisement

ವೃಷಭ: ಆರಂಭಿಸಿರುವ ಕಾರ್ಯಗಳಲ್ಲಿ ಯಶಸ್ಸು. ಉದ್ಯೋಗ ಸ್ಥಾನದಲ್ಲಿ ಅನುಕೂಲದ  ವಾತಾವರಣ. ಬಂಧುಗಳ ಕಡೆಯಿಂದ  ಶುಭ ವಾರ್ತೆ. ಸಾಮಾಜಿಕ ಕಾರ್ಯಗಳಿಗೆ  ಉದ್ಯಮಿಗಳ ಪ್ರೋತ್ಸಾಹ. ಕೇಟರಿಂಗ್‌ ವ್ಯವಹಾರಸ್ಥರಿಗೆ  ಉತ್ತಮ ಲಾಭ.

ಮಿಥುನ: ಸಾಹಿತ್ಯಸಂಬಂಧಿ  ಚಟುವಟಿಕೆಗಳಲ್ಲಿ  ತೊಡಗಿಸಿಕೊಳ್ಳುವಿಕೆ. ಉದ್ಯೋಗಸ್ಥರಿಗೆ  ಸಂತೃಪ್ತಿ, ಸಮಾಧಾನದ ಅನುಭವ. ಸ್ವಂತ ಉದ್ಯಮಕ್ಕೆ ಮೂಲ ಸೌಲಭ್ಯಗಳ ಸಮಸ್ಯೆ.  ಪ್ರಾಚೀನ ವಿದ್ಯೆಗಳನ್ನು ಕಲಿಯುವ ಆಸಕ್ತಿ.  ಕೃಷಿಭೂಮಿ ಖರೀದಿ ಪ್ರಕ್ರಿಯೆ ಆರಂಭ. ಪರಿಸರ ರಕ್ಷಣೆಯಲ್ಲಿ ಆಸಕ್ತಿ.

ಕರ್ಕಾಟಕ: ಸಂತೃಪ್ತಿಯ ಮನೋಭಾವವನ್ನು ಬೆಳೆಸಿಕೊಳ್ಳುವ ಪ್ರಯತ್ನ. ಉದ್ಯೋಗ ಸ್ಥಾನದಲ್ಲಿ ಸ್ವಲ್ಪ ಸುಧಾರಣೆ.ಸ್ವಂತ ಉದ್ಯಮ ತ್ವರಿತ ಗತಿಯಲ್ಲಿ ಪ್ರಗತಿ. ವ್ಯಾಪಾರಿಗಳಿಗೆ ಅಸೂಯಾಪರ ಶತ್ರುಗಳ ಬಾಧೆ. ಸ್ವಪ್ರಯತ್ನದಿಂದ ಆರೋಗ್ಯವೃದ್ಧಿ.

ಸಿಂಹ: ಕರ್ತವ್ಯ ಪ್ರಜ್ಞೆಗೆ ಪ್ರಾಧಾನ್ಯ ನೀಡುವುದರಿಂದ  ವಿಜಯದ ಭರವಸೆ. ಉದ್ಯೋಗ ಸ್ಥಾನದಲ್ಲಿ ವಿಶೇಷ ಮನ್ನಣೆ.  ಉದ್ಯಮದ ಪ್ರಗತಿಯ ವೇಗವರ್ಧನೆ  ಆರಂಭ. ಉದ್ಯೋಗಾಸಕ್ತರಿಗೆ  ಹೊಸ ಅವಕಾಶಗಳು ಗೋಚರ.

Advertisement

ಕನ್ಯಾ: ಸ್ವಂತದ ಏಳಿಗೆಯ ದಿನಗಳ ಆರಂಭ. ಉದ್ಯೋಗದಲ್ಲಿ  ಹಿತಕರ ವಾತಾವರಣ. ವಾಹನ ಉದ್ಯಮಿಗಳಿಗೆ ಆದಾಯ ವೃದ್ಧಿ. ಸಟ್ಟಾ ವ್ಯವಹಾರದಿಂದ ದೂರವಿರುವುದರಿಂದ ಹಿತ. ಸಣ್ಣ ಪ್ರಮಾಣದ ಕೃಷಿಭೂಮಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಶ್ರೀಕಾರ.

ತುಲಾ: ದಂಪತಿಗಳ ನಡುವೆ ಅನುರಾಗ ವೃದ್ಧಿ.  ಉದ್ಯೋಗದಲ್ಲಿ ಜ್ಞಾನ ಮತ್ತು  ಪ್ರತಿಭೆಗೆ ಮನ್ನಣೆ. ದೇವತಾ ಪ್ರಾರ್ಥನೆಯಿಂದ ಅನುಕೂಲ. ಹತ್ತಿರದ ತೀರ್ಥಕ್ಷೇತ್ರಕ್ಕೆ ಸಂದರ್ಶನ. ಮಕ್ಕಳಿಗೆ ಸಂಗೀತ ಕಲಿಕೆಯಲ್ಲಿ  ಆಸಕ್ತಿ. ಬಂಗಾರದ ಅಂಗಡಿಗೆ ಭೇಟಿ.

ವೃಶ್ಚಿಕ: ಹವಾಮಾನ ವ್ಯತ್ಯಾಸದಿಂದ ಆರೋಗ್ಯದಲ್ಲಿ ಕೊಂಚ ಹಿನ್ನಡೆ. ಉದ್ಯೋಗ ನಿರ್ವಹಣೆ ಮಂದಗತಿಯಲ್ಲಿ. ಸರಕಾರಿ ಉದ್ಯೋಗಿಗಳಿಗೆ ವರ್ಗಾವಣೆಯ ಆತಂಕ. ವಾಹನ ಬಿಡಿಭಾಗ ವ್ಯಾಪಾರಿಗಳಿಗೆ  ಸುಯೋಗ.

ಧನು: ಜೀವನದಲ್ಲಿ ಒಳ್ಳೆಯ ಕಾಲ ಆರಂಭ. ಸಹೋದ್ಯೋಗಿಗಳಿಂದ ಪ್ರೀತಿ, ಗೌರವದ ವರ್ತನೆ. ಸ್ವಂತದ ಚಿಕ್ಕ  ಉದ್ಯಮದ ಬೆಳವಣಿಗೆ ಮುಂದುವರಿಕೆ.  ಉದ್ಯೋಗಾಸಕ್ತ ಶಿಕ್ಷಿತರಿಗೆ ಅವಕಾಶ . ಗೋಚರ. ಗೃಹಿಣಿಯರ ಸೊÌàದ್ಯೋಗ ಯೋಜನೆ ಗಳ ಪ್ರಗತಿ.

ಮಕರ: ಅಹಿತಕರ ಅನುಭವಗಳಿಂದ ವಿಚಲಿತರಾಗದಿರಿ. ಉದ್ಯೋಗ ಸ್ಥಾನದಲ್ಲಿ ಹೊಸ ಜವಾಬ್ದಾರಿ ನಿಯೋಜನೆ. ವಸ್ತ್ರ, ಸಿದ್ಧ ಉಡುಪು, ಆಭರಣ, ಪಾದರಕ್ಷೆ, ಶೋಕಿ ಸಾಮಗ್ರಿ ವ್ಯಾಪಾರಿಗಳಿಗೆ ಹೇರಳ ಲಾಭ.

ಕುಂಭ: ಹೆಚ್ಚು ಕಡಿಮೆ ಮಿಶ್ರಫ‌ಲಗಳ ದಿನ. ಉದ್ಯೋಗದಲ್ಲಿ ಹೆಚ್ಚುವರಿ ಜವಾಬ್ದಾರಿಗಳು. ಸಂಸಾರದ ಜವಾಬ್ದಾರಿ ನಿರ್ವಹಣೆ ಸುಗಮ. ಕೃಷಿಯಲ್ಲಿ ಹೊಸ ಪ್ರಯೋಗ. ಗ್ರಾಹಕರ ಬೇಡಿಕೆಗೆ ಶೀಘ್ರ ಸ್ಪಂದನ. ಸಮಾಜ ಸೇವಾಕಾರ್ಯಗಳಿಗೆ  ಮತ್ತಷ್ಟು ಅವಕಾಶಗಳು.

ಮೀನ: ವಿಶೇಷ ಭಗವದನುಗ್ರಹದ  ಅನುಭವ. ಉದ್ಯೋಗದಲ್ಲಿ ಸಂತೃಪ್ತಿ. ಪರಿಚಿತ  ವ್ಯಕ್ತಿಗಳಿಂದ ಸಕಾಲದಲ್ಲಿ ಸಹಾಯ. ಸರಕಾರಿ ಕಾರ್ಯಾಲಯಗಳಲ್ಲಿ  ಸಕಾರಾತ್ಮಕ ಸ್ಪಂದನ.ಉಪಕೃತರಿಂದ ಹರ್ಷ ಪ್ರಕಟನೆ.  ಭವಿಷ್ಯದ ಯೋಜನೆಗಳ ಅನುಷ್ಠಾನಕ್ಕೆ ಸಿದ್ಧತೆ. ಸಾಮಾಜಿಕ ಕ್ಷೇತ್ರದಲ್ಲಿ ಹೊಸ ಹೊಣೆಗಾರಿಕೆ ಸಂಭವ.

Advertisement

Udayavani is now on Telegram. Click here to join our channel and stay updated with the latest news.

Next