Advertisement

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

07:33 AM Apr 30, 2024 | Team Udayavani |

ಮೇಷ: ಉದ್ಯೋಗ ಸ್ಥಾನದಲ್ಲಿ  ಹೆಚ್ಚು ಪರಿಶ್ರಮ ಅನಿವಾರ್ಯ.  ಹೊಸ ಹೂಡಿಕೆಗಳ ವಿಷಯದಲ್ಲಿ ಎಚ್ಚರ. ಪಾಲುದಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಿ. ಕುಟುಂಬದೊಳಗೆ ಸಾಮರಸ್ಯ  ಕಾಯ್ದುಕೊಳ್ಳುವ ಪ್ರಯತ್ನ.

Advertisement

ವೃಷಭ: ಹೊಸ ಪಾಲುದಾರಿಕೆ ವ್ಯವಹಾರದಲ್ಲಿ ಮಧ್ಯಮ ಲಾಭ. ಉದ್ಯೋಗಸ್ಥರಿಗೆ ಶುಭವಾರ್ತೆ.  ಹೊಸ ಕೃಷಿ ಭೂಮಿಯಲ್ಲಿ ಕೆಲಸ ಆರಂಭ.  ಸರಕಾರಿ ಅಧಿಕಾರಿಗಳಿಗೆ ವರ್ಗಾವಣೆಯ ಶಂಕೆ.  ಮಕ್ಕಳಿಗೆ ಸಂಭ್ರ ಮದ ದಿನ.

ಮಿಥುನ: ಯಾವುದೇ ಪರಿಸ್ಥಿತಿಯನ್ನು  ಎದುರಿಸಿ  ಕೆಲಸ ಮಾಡುವ ಧೈರ್ಯ. ಉದ್ಯೋಗ ಸ್ಥಾನದಲ್ಲಿ ತರಲೆ.   ಹಿತಶತ್ರುಗಳ ಅಡ್ಡಗಾಲು. ಧ್ಯಾನ, ಸ್ವಾಧ್ಯಾಯಗಳಲ್ಲಿ ಮನಸ್ಸು ಲೀನ.ಉದ್ಯಮ ಅಭಿವೃದ್ಧಿಯ ಮೊದಲ ಹಂತ ಪ್ರಗತಿಯಲ್ಲಿ.

ಕರ್ಕಾಟಕ: ದೇವತಾರ್ಚನೆಯಿಂದ  ಆನಂದಾನುಭೂತಿ.  ಉದ್ಯೋಗದಲ್ಲಿ  ಸಹೋದ್ಯೋಗಿಗಳ ಸಹಕಾರ. ಉದ್ಯಮದ ಅಭಿವೃದ್ಧಿಗೆ ಪಾಲುದಾರರ ಸಹಮತ.  ಉದ್ಯೋಗ ಅರಸುತ್ತಿರುವವರಿಗೆ ಅವಕಾಶಗಳು ಲಭ್ಯ.

ಸಿಂಹ: ಸಹನೆ ಪರೀಕ್ಷೆಯಲ್ಲಿ ಉತ್ತೀರ್ಣ ರಾಗಿದ್ದೀರಿ. ಉದ್ಯಮದ ಎಲ್ಲ ವಿಭಾಗಗಳಲ್ಲೂ ಲಾಭದಾಯಕವಾಗಿ ಮುನ್ನಡೆ. ಉತ್ಪನ್ನಗಳ ಜನಪ್ರಿಯತೆ ವೃದ್ಧಿ. ಕೃಷ್ಯುತ್ಪನ್ನಗಳ ಮಾರಾಟದಿಂದ ಉತ್ತಮ ಲಾಭ.

Advertisement

ಕನ್ಯಾ: ಎಲ್ಲೆಡೆ ಹಿತಾನುಭವದ ದಿನ.ಮೇಲಿನವರಿಂದ ಮೆಚ್ಚುಗೆಯ ಮಾತುಗಳು. ಆಮಿಷಗಳಿಗೆ ಬಲಿಯಾಗದಂತೆ ಎಚ್ಚರಿಕೆ ವಹಿಸಿ. ಸಣ್ಣ ಉದ್ಯಮಗಳಿಗೆ ಒಳ್ಳೆಯ ದಿನ. ಕೃಷಿಭೂಮಿ ಅಭಿವೃದ್ಧಿಗೆ ಕಾಲಮಿತಿಯ ಯೋಜನೆ.

ತುಲಾ: ವರ್ತಮಾನದಲ್ಲಿ ಬದುಕುವುದನ್ನು ಕಲಿಯಿರಿ. ದೈವಾನುಗ್ರಹ ಉತ್ತಮ.  ಉದ್ಯೋಗ ದಲ್ಲಿ ಸ್ವಲ್ಪ ಸುಧಾರಣೆ. ಉದ್ಯಮಿಗಳ ಸಮಸ್ಯೆ ಪರಿಹಾರ. ಉದ್ಯೋಗಾರ್ಥಿಗಳಿಗೆ ಶೀಘ್ರ ವ್ಯವಸ್ಥೆ. ಮಹಿಳೆಯರ ಸ್ವಾವಲಂಬನೆ ಯೋಜನೆಗಳ ಪ್ರಗತಿ.

ವೃಶ್ಚಿಕ:   ಉದ್ಯೋಗದಲ್ಲಿ ಭಾರೀ ಉನ್ನತಿ ಯಾಗದಿದ್ದರೂ ಆವಶ್ಯಕತೆಗೆ ಬೇಕಾದಷ್ಟು ಆದಾಯಕ್ಕೆ ಕೊರತೆಯಾಗದು. ಮಕ್ಕಳ ಉದ್ಯಮ ಅಭಿವೃ ದ್ಧಿಯ ಪಥದಲ್ಲಿ.   ವಸ್ತ್ರಾಭರಣ  ಖರೀದಿ. ದೂರದಲ್ಲಿರುವ ಬಂಧುಗಳ ಆಗಮನ.

ಧನು: ಉದ್ಯೋಗದಲ್ಲಿ ಮುನ್ನಡೆಯಲು ಅನುಕೂಲ ಪರಿಸರ. ಸ್ವಂತ ಉದ್ಯಮದ ಕ್ರಮಾಗತ ಪ್ರಗತಿ. ದೀರ್ಘಾವಧಿ ಯೋಜನೆ ಗಳಲ್ಲಿ ಹಣ ಹೂಡಿಕೆಯಿಂದ ಲಾಭ. ನಿತ್ಯದ ಚಟುವಟಿಕೆ ಗಳಿಂದ ಕಾರ್ಯಸಾಮರ್ಥ್ಯ ವೃದ್ಧಿ.

ಮಕರ: ಒತ್ತಡದ ವಾತಾವರಣದಲ್ಲಿ  ಕ್ಲಪ್ತ ಸಮಯದಲ್ಲಿ ಕಾರ್ಯ ಮುಗಿಸಿದ ತೃಪ್ತಿ. ಅಧ್ಯಾತ್ಮ ಸಾಧನೆಯಲ್ಲಿ ಆಸಕ್ತಿ. ವಸ್ತ್ರ, ಉಡುಪು, ಅಲಂಕಾರ ಸಾಮಗ್ರಿ ವ್ಯಾಪಾರಿಗಳಿಗೆ ಅಧಿಕ  ಲಾಭ. ಹತ್ತಿರದ  ದೇವಾಲಯಕ್ಕೆ ಸಂದರ್ಶನ.

ಕುಂಭ: ಶೀಘ್ರ ಕಾರ್ಯಸಾಧನೆಯ ತೃಪ್ತಿ. ಉದ್ಯೋಗ, ವ್ಯವಹಾರಗಳ ಕುರಿತು ಆತಂಕ. ಮರುದಿನದ ಕಾರ್ಯಗಳಿಗೆ  ಸಿದ್ಧತೆ. ಹಿರಿಯರ ಮನೆಯಲ್ಲಿ ದೇವತಾಕಾರ್ಯ. ಬಂಧು, ಮಿತ್ರರೊಂದಿಗೆ ಸಮಾಗಮ .

ಮೀನ:  ಉದ್ಯೋಗದಲ್ಲಿ ಯಶಸ್ಸು. ಸರಕಾರಿ ನೌಕರರಿಗೆ ಕೊಂಚ ಕಿರಿಕಿರಿ. ಹಳೆಯ ಒಡನಾಡಿಗಳೊಂದಿಗೆ ಪುನರ್ಮಿಲನ.  ತಂದೆಯ ಕಡೆಯ ಬಂಧುಗಳಿಗೆ ಸಹಾಯ ಸಾಮಾಜಿಕ ಕಾರ್ಯಕ್ಕೆ ಮನೆಮಂದಿಯ ಉತ್ತೇಜನ. ಎಲ್ಲರ ಆರೋಗ್ಯ ಉತ್ತಮ.

Advertisement

Udayavani is now on Telegram. Click here to join our channel and stay updated with the latest news.

Next