Advertisement

Horoscope: ಈ ರಾಶಿಯ ಅವಿವಾಹಿತರಿಗಿಂದು ಸಮರ್ಪಕ ಜೋಡಿ ಸಾಧ್ಯತೆ

07:33 AM Feb 12, 2024 | Team Udayavani |

ಮೇಷ: ಚಿಂತೆಗೆ ಪೂರ್ಣ ವಿರಾಮ ನೀಡಿ ಹೊಸ ಸಪ್ತಾಹವನ್ನು  ಆರಂಭಿಸಿ. ಉದ್ಯಮಿಗಳಿಗೆ  ಸಪ್ತಾಹಾರಂಭದ ವಹಿವಾಟಿನಲ್ಲಿ ಸಾಮಾನ್ಯ ಲಾಭ. ಸಟ್ಟಾ ವ್ಯವಹಾದಿಂದ ದೂರವಿರಿ. ಸಹೋದ್ಯೋಗಿಗಳೊಡನೆ ಕೆಲಸದಲ್ಲಿ ಆನಂದದ ವಿನಿಮಯ.

Advertisement

ವೃಷಭ: ಸಂಸಾರದ  ಹಿತಕ್ಕಾಗಿ ಕೈಗೊಂಡ ವಿವಿಧ ಯೋಜನೆಗಳ ಅವಲೋಕನ.   ಉದ್ಯೋಗಸ್ಥರಿಂದ ಹೆಮ್ಮೆ ಪಡುವಂತಹ ಸಾಧನೆ. ಕೆಲವು  ಬಗೆಯ ಉದ್ಯಮಗಳಿಗೆ  ಅಪರಿಮಿತ ವೃದ್ಧಿಯ ಕಾಲ. ವಸ್ತ್ರ,   ಸಿದ್ಧ ಉಡುಪು  ವ್ಯಾಪಾರಿಗಳಿಗೆ  ಹೇರಳ ಲಾಭ.

ಮಿಥುನ:  ಕ್ಷುಲ್ಲಕ ವಿಷಯಗಳಿಗೆ ಮಹತ್ವ ನೀಡಬೇಡಿ. ಉದ್ಯೋಗ ಸ್ಥಾನಕ್ಕೆ ಸಂಸ್ಥೆಯ ಪ್ರಮುಖರ ಭೇಟಿ. ಶಿಕ್ಷಿತ ಯುವಕರಿಗೆ  ಕೃಷಿಯಲ್ಲಿ ಆಸಕ್ತಿ. ಉದ್ಯಮಿಗಳಿಗೆ  ನೌಕರರ ಸಮಸ್ಯೆಗಳಿಂದ ಬಿಡುಗಡೆ. ಧಾರ್ಮಿಕ ಸಾಹಿತ್ಯ ಅಧ್ಯಯನ‌.

ಕರ್ಕಾಟಕ: ಕೇವಲ ಕರ್ತವ್ಯಪ್ರಜ್ಞೆಯಿಂದ  ಕೆಲಸ ಮಾಡುವ ಪ್ರವೃತ್ತಿ. ಉದ್ಯೋಗ ಸ್ಥಾನದಲ್ಲಿ  ಕಾರ್ಯ ನಿರ್ವಹಣೆಗೆ  ಶ್ಲಾಘನೆ. ಯಜಮಾನರು ಮತ್ತು ನೌಕರರ ನಡುವೆ ಸಾಮ ರಸ್ಯ ವೃದ್ಧಿ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷಿತ  ಪ್ರಮಾಣದಲ್ಲಿ ಲಾಭ.

ಸಿಂಹ: ಎಲ್ಲ ವಿಭಾಗಗಳ ಕೆಲಸಗಳನ್ನು ಕ್ಲಪ್ತ ಸಮಯದಲ್ಲಿ ನಿರ್ವಹಿಸಿದ ತೃಪ್ತಿ. ಸರಕಾರಿ ನೌಕರರಿಗೆ  ದೂರಕ್ಕೆ ವರ್ಗಾವಣೆಯ ಆತಂಕ.  ಗೃಹೋತ್ಪನ್ನಗಳಿಗೆ ವಾಪಕ ಬೇಡಿಕೆ. ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳ ವೀಕ್ಷಣೆ.

Advertisement

ಕನ್ಯಾ:  ವಹಿಸಿಕೊಟ್ಟ ಕೆಲಸಗಳನ್ನು ಅವಧಿಗೆ ಮೊದಲೇ ಮುಗಿಸಿದ ಸಮಾಧಾನ.ಅಚ್ಚಕಟ್ಟಾದ ಕಾರ್ಯಕ್ಕೆ ಮೇಲಿನವರಿಂದ ಪ್ರಶಂಸೆ. ಸಹಕಾರಿ ಕ್ಷೇತ್ರದ ವಿತ್ತ ಸಂಸ್ಥೆಗಳ ಜನಪ್ರಿಯತೆ ವೃದ್ಧಿ.  ಬಂಧುಗಳ ಮನೆಯಲ್ಲಿ  ದೇವತಾ ಕಾರ್ಯ.

ತುಲಾ: ಆಯುರ್ವೇದ ಚಿಕಿತ್ಸೆಯಿಂದ  ಆರೋಗ್ಯ ವೃದ್ಧಿ.ಉದ್ಯೋಗ ಸ್ಥಾನದಲ್ಲಿ  ವಿಭಾಗ ಬದಲಾವಣೆ.  ನ್ಯಾಯಾಲಯದಲ್ಲಿ ಆಸ್ತಿ ವ್ಯಾಜ್ಯ ತೀರ್ಮಾನ ವಿಳಂಬ. ಕೃಷ್ಯುತ್ಪನ್ನಗಳಿಂದ ಸಾಮಾನ್ಯ ಆದಾಯ. ಅವಿವಾಹಿತರಿಗೆ ಸಮರ್ಪಕ ಜೋಡಿ ಸಾಧ್ಯತೆ.

ವೃಶ್ಚಿಕ:  ಆನಂದ ಭಾವ ದೊಂದಿಗೆ ಹೊಸ ಸಪ್ತಾಹ ಆರಂಭ. ಉದ್ಯೋಗ, ವ್ಯವಹಾರಗಳಲ್ಲಿ  ವಿಶೇಷ ಸಾಧನೆ. ಲೇವಾದೇವಿ ಹಾಗೂ ಸಟ್ಟಾ ವ್ಯವಹಾರದಿಂದ  ಹಣಕಾಸು ನಷ್ಟ. ಪ್ರಸಿದ್ಧ ಸಂಗೀತಗಾರರ ಗಾಯನ ಶ್ರವಣದ ಅವಕಾಶ.

ಧನು: ಅಪರೂಪದಲ್ಲಿ ಭೇಟಿಯಾದ ಬಂಧುವಿನಿಂದ ವಿಶೇಷ ವ್ಯವಹಾರಕ್ಕೆ ಸಂಬಂಧಿಸಿದ ಅಮೂಲ್ಯ ಮಾಹಿತಿ ಲಭ್ಯ.    ಉದ್ಯೋಗ ಸ್ಥಾನದಲ್ಲಿ ವಿಶಿಷ್ಟ ಮಾದರಿಯಲ್ಲಿ  ಕಾರ್ಯನಿರ್ವಹಣೆ. ಪಾಲುದಾರಿಕೆ ಉದ್ಯಮದಲ್ಲಿ ನಿಧಾನ ಪ್ರಗತಿ.

ಮಕರ:  ಕ್ಷಿಪ್ರಗತಿಯ ಕಾರ್ಯದಿಂದ  ಶೀಘ್ರ ಫಲ ಪ್ರಾಪ್ತಿ.  ಉದ್ಯೋಗ ಸ್ಥಾನದಲ್ಲಿ ನಿರಾಳ ವಾತಾವರಣ.  ವೃತ್ತಿಪರರಿಗೆ ನಿರ್ದಿಷ್ಟ ಅವಧಿಯಲ್ಲಿ ಗುರಿ ಮುಟ್ಟಿದ ತೃಪ್ತಿ.  ವಸ್ತ್ರ, ಸಿದ್ಧ ಉಡುಪು, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಲಾಭ.

ಕುಂಭ: ಸಾಪ್ತಾಹಿಕ ವಿರಾಮದ ಬಳಿಕ ತುರುಸಿನ ಕಾರ್ಯಕ್ರಮಗಳು. ಉದ್ಯೋಗ ದಲ್ಲಿ ಹೆಚ್ಚುವರಿ ಜವಾಬ್ದಾರಿ. ಉದ್ಯಮದ ಉತ್ಪನ್ನಗಳಿಗೆ  ಹೆಚ್ಚಿದ ಬೇಡಿಕೆ. ಪೂರಕ ವ್ಯವಸ್ಥೆಗಳಿಗಾಗಿ  ಧನ ವ್ಯಯ. ಗೃಹೋತ್ಪನ್ನಗಳಿಗೆ  ಹೆಚ್ಚಿದ ಬೇಡಿಕೆ.

ಮೀನ: ವಿರಾಮದ ಬಳಿಕ ಇಮ್ಮಡಿ ಉತ್ಸಾಹದೊಂದಿಗೆ ದಿನಾರಂಭ.ವಿಸ್ತೃತ ವ್ಯಾಪ್ತಿಯಲ್ಲಿ  ಕಾರ್ಯಾಚರಣೆ. ಸರಕಾರಿ ನೌಕರರ ಪೂರ್ಣ ಸಹಕಾರ.  ಧಾರ್ಮಿಕ ರಂಗದಲ್ಲಿ ಜವಾಬ್ದಾರಿ ಮುಂದುವರಿಕೆ.  ಹಿರಿಯರಿಗೆ ಆನಂದ.

Advertisement

Udayavani is now on Telegram. Click here to join our channel and stay updated with the latest news.

Next