Advertisement

Horoscope: ಈ ರಾಶಿಯವರಿಂದು ಒಳ್ಳೆಯ ಘಟನೆಗಳ ಸರಮಾಲೆಯನ್ನು ನೋಡಲಿದ್ದಾರೆ

07:29 AM Dec 24, 2023 | Suhan S |

ಮೇಷ: ಮನಸ್ಸನ್ನು   ಹಗುರ ವಾಗಿಟ್ಟಕೊಂಡು ವಿರಾಮದ ಆನಂದವನ್ನು ಅನುಭವಿಸಿ. ಹೆಚ್ಚಿನ ನೌಕರ ವರ್ಗದವರಿಗೆ ನೆಮ್ಮದಿ. ಸಹೋದ್ಯೋಗಿಗಳಿಂದ  ಕುಟುಂಬ ಸಹಿತ ಸದ್ಭಾವನೆಯ ಭೇಟಿ. ಬಂಧುವರ್ಗದಲ್ಲಿ ವಿವಾಹದ ಸಂಭ್ರಮ.

Advertisement

ವೃಷಭ: ಮರುದಿನದ  ನಿಯೋಜಿತ  ಕಾರ್ಯಗಳಿಗೆ ಸಜ್ಜಾಗುವ ಸಮಯ.  ಸಹೋದ್ಯೋಗಿ  ಗೆಳೆಯರೊಂದಿಗೆ ಮಿಲನ. ಕೃಷಿ ಕ್ಷೇತ್ರದಲ್ಲಿ  ಹೊಸ ಬೆಳೆಗಳ ಪ್ರಯೋಗ. ಗೃಹೋತ್ಪನ್ನಗಳಿಗೆ ಅಧಿಕ ಬೇಡಿಕೆ. ಕುಟುಂಬ ಸಹಿತ ಪ್ರಾಕೃತಿಕ ತಾಣಕ್ಕೆ ಭೇಟಿ.

ಮಿಥುನ:  ಎಲ್ಲ ವರ್ಗದವರಿಗೂ   ಸಮಾಧಾನದ ದಿನ. ಉದ್ಯಮಿಗಳಿಗೆ  ನೆಮ್ಮದಿ ತರುವ  ಸಮಾಚಾರ.   ದೂರದ ಬಂಧುಗಳು ಮತ್ತು ಹಳೆಯ ಮಿತ್ರ ರೊಂದಿಗೆ ಭೇಟಿ. ವಸ್ತ್ರ, ಆಭರಣ, ಶೋಕಿ ಸಾಮಗ್ರಿ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ.

ಕರ್ಕ:  ವ್ಯಕ್ತಿತ್ವ ವಿಕಸನ  ಹಾಗೂ ಸಮಗ್ರ ಅಭಿವೃದ್ಧಿಯ ಕುರಿತು  ವಿಸ್ತೃತ  ಚಿಂತನೆ.  ಕಿರಿಯ ಬಂಧುವಿನ ವಿದ್ಯಾರ್ಜನೆಗೆ ಸಹಾಯ. ಉದ್ಯೋಗದಲ್ಲಿ ಪದೋ ನ್ನತಿಯ  ಸೂಚನೆ. ಉದ್ಯಮದ ಹೊಸ ಉತ್ಪನ್ನಗಳ ಜನಪ್ರಿಯತೆ ವೃದ್ಧಿ.

ಸಿಂಹ: ಉದ್ಯೋಗ, ಉದ್ಯಮದ ಹೊಣೆಗಾರಿಕೆಗಳಿಗೆ ತಾತ್ಕಾಲಿಕ ವಿರಾಮ. ಹತ್ತಿರದ ಪ್ರವಾಸಿ ಧಾಮಕ್ಕೆ ಭೇಟಿ. ನಿರ್ಮಾಣ ವೃತ್ತಿಯ ವರಿಗೆ  ಕಾರ್ಯದ  ಒತ್ತಡ.  ಉದ್ಯೋ ಗಾಸಕ್ತರಿಗೆ ಅವಕಾಶಗಳು ಗೋಚರ.  ವಿವಾಹ ಸಮಸ್ಯೆ ನಿವಾರಣೆಗೆ  ಪ್ರಯತ್ನ.

Advertisement

 ಕನ್ಯಾ: ಹೊಸ ಉದ್ಯಮ ಆರಂಭಿಸುವ ಕುರಿತು ಸಮಾಲೋಚನೆ. ಸಾಮಾಜಿಕ  ಅಭಿವೃದ್ಧಿ ಯೋಜನೆಗಳ ಅನುಷ್ಠಾನದ ಕುರಿತು ಗಣ್ಯರ ವಲಯ ದಲ್ಲಿ  ಚರ್ಚೆ. ಸ್ವಂತ  ವ್ಯವಹಾರದ ಸಂಬಂಧ ಸಣ್ಣ ಪ್ರವಾಸ ಸಂಭವ.

ತುಲಾ: ಹತಾಶೆಯಿಂದ ಕೈಬಿಟ್ಟಿದ್ದ ಯೋಜನೆಗಳಿಗೆ ಮತ್ತೆ ಜೀವ ತುಂಬುವ ಪ್ರಯತ್ನ ಆರಂಭ. ಸ್ವಂತ ಆರೋಗ್ಯದ ಬಗೆಗೆ ಕಾಳಜಿ ಇರಲಿ. ಬಾಲ್ಯದ ಒಡನಾಡಿಗಳ ಅನಿರೀಕ್ಷಿತ ಭೇಟಿ. ಮಹಿಳೆಯರ ಗೃಹೋತ್ಪನ್ನ  ಘಟಕಕ್ಕೆ ಸಂದರ್ಶನ.

ವೃಶ್ಚಿಕ: ಒಳ್ಳೆಯ ಘಟನೆ ಗಳು ಸರಮಾಲೆಯನ್ನು ನೋಡುವಿರಿ. ಪಾಠೇತರ ಚಟು ವಟಿಕೆಗಳಲ್ಲಿ  ಮಕ್ಕಳ  ಸಾಧನೆಗೆ ಸರ್ವತ್ರ ಪ್ರಶಂಸೆ. ಕೃಷಿಕ್ಷೇತ್ರಕ್ಕೆ  ಕಿರಿಯರಿಗೆ ಹಿತಾನುಭವ. ಪಾಲುದಾರಿಕೆಯಲ್ಲಿ ಸಣ್ಣ ಪ್ರಮಾಣದ ಹೈನೋದ್ಯಮ ಆರಂಭ.

ಧನು: ತಾತ್ಕಾಲಿಕ ಹಿನ್ನಡೆ ಗಳಿಂದ  ಮುಕ್ತರಾದ ಅನುಭವ. ಸಹೋದ್ಯೋಗಿ ಮಿತ್ರರೊಂದಿಗೆ ಕೃಷಿಕ್ಷೇತ್ರಕ್ಕೆ ಭೇಟಿ. ಸಮಾಜದ  ಏಳಿಗೆ. ಪರಿಸರ ಸ್ವಚ್ಛತೆಯ  ಕಾರ್ಯಗಳಲ್ಲಿ ಆಸಕ್ತಿ. ದೇವತಾನುಗ್ರಹ ಉತ್ತಮ. ಕೃಷಿ ಸಂಬಂಧಿ ಉದ್ಯಮ ಪ್ರಗತಿ.

ಮಕರ: ಕಾರ್ಯರಂಗದಲ್ಲಿ ಕೊನೆಯಿಲ್ಲದ  ಒತ್ತಡ.  ಮಕ್ಕಳಿಗೆ ಪಾಠೇತರ ಚಟುವ ಟಿಕೆಗಳಲ್ಲಿ ಒಳ್ಳೆಯ ಹೆಸರು. ಧಾರ್ಮಿಕ ಚಟುವಟಿಗಳಲ್ಲಿ  ಆಸಕ್ತಿ. ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳಲ್ಲಿ ಪಾಲುಗೊಳ್ಳುವ ಅವಕಾಶ.

ಕುಂಭ: ಬಿಡುವಿಲ್ಲದ ಕಾರ್ಯ ಗಳ ನಡುವೆ  ಪುಟ್ಟ ಮನೋರಂಜನೆ. ಸಾಮಾಜಿಕ ಕ್ಷೇತ್ರದಲ್ಲಿ ಹೊಸ ಹೊಣೆಗಾರಿಕೆಗಳನ್ನು ವಹಿಸಿಕೊಳ್ಳಲು  ಆಹ್ವಾನ. ಬಂಧುಗಳ ಮನೆಯಲ್ಲಿ  ಧಾರ್ಮಿಕ ಸಮಾರಂಭ. ಗ್ರಾಹಕರ ಬೇಡಿಕೆಗಳಿಗೆ ಶೀಘ್ರ ಸ್ಪಂದಿಸಲು ಕ್ರಮ.

ಮೀನ:  ಶನಿ ಪ್ರಭಾವದಿಂದ ಕಾರ್ಯ ವಿಳಂಬವಾದರೂ ಕ್ರಿಯೆಗೆ ಪೂರ್ಣ ವಿರಾಮ ಇರದು. ಅರ್ಧದಲ್ಲಿ ನಿಂತ ಕಾರ್ಯಗಳನ್ನು ಪುನರಾರಂಭಿಸಲು ನಿರ್ಧಾರ.  ವೃತ್ತಿರಂಗದ ಮಿತ್ರರೊಡನೆ ಸಮಾಲೋಚನೆ. ಕೀರ್ತಿ ವರ್ಧನೆ.

Advertisement

Udayavani is now on Telegram. Click here to join our channel and stay updated with the latest news.

Next