Advertisement

ಇಂದಿನ ಗ್ರಹಬಲ: ಈ ರಾಶಿಯವರಿಂದು ಉದ್ಯೋಗದಲ್ಲಿ ಘರ್ಷಣೆಗೆ ಅವಕಾಶ ನೀಡಬೇಡಿ

08:12 AM May 21, 2022 | Team Udayavani |

21-05-2022

Advertisement

ಮೇಷ: ಗುರುಹಿರಿಯರಲ್ಲಿ ಬೇಸರ ಬೇಡ. ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ ಉತ್ತಮ ಅವಕಾಶ. ಪ್ರಯಾಣದಿಂದ ಸುಖ. ಧನ ಲಾಭ. ಮನೆಯಲ್ಲಿ ಸಂತಸದ ವಾತಾವರಣ. ಮಕ್ಕಳಿಂದ ಸಂತೋಷ ಪ್ರಾಪ್ತಿ.

ವೃಷಭ: ಮಾತಿನಲ್ಲಿ ಎಚ್ಚರ ವಹಿಸಿ. ಉದ್ಯೋಗದಲ್ಲಿ ಘರ್ಷಣೆಗೆ ಅವಕಾಶ ನೀಡಬೇಡಿ. ಧೈರ್ಯದಿಂದ ಕಾರ್ಯ ಸಿದ್ಧಿ. ಧನಾಗಮನಕ್ಕೆ ಕೊರತೆ ಇರದು. ವಿದ್ಯಾರ್ಥಿಗಳಿಗೆ ಅನುಕೂಲಕರ. ದೇವತಾ ಸ್ಥಳ ಸಂದರ್ಶನ.

ಮಿಥುನ: ಚಟುವಟಿಕೆಯಿಂದ ಕೂಡಿದ ದಿನ. ಸಾಮಾಜಿಕ ಜನಪರ ಕಾರ್ಯದಲ್ಲಿ ತೊಡಗುವುದರಿಂದ ಗೌರವ ಸುಖ ಸಂತೋಷ ಸಿದ್ಧಿ. ಕಾರ್ಯ ಒತ್ತಡವಿದ್ದರೂ ವಿದ್ಯಾರ್ಥಿಗಳಿಗೆ, ಉದ್ಯೋಗಸ್ಥರಿಗೆ ಉತ್ತಮ ಫ‌ಲಿತಾಂಶ ಸಿಗುವ ಸಮಯ.

ಕರ್ಕ: ಆರೋಗ್ಯ ವಿಚಾರದಲ್ಲಿ ಉದಾಸೀನ ಬೇಡ. ತಾಳ್ಮೆ ಕಳೆದುಕೊಳ್ಳದೆ ನೇರ ಸಾಮಾಜಿಕ ಜನಪರ ವ್ಯವಹಾರ ಕೆಲಸ ಕಾರ್ಯಗಳಿಂದ ಗೌರವ ಪ್ರಾಪ್ತಿ. ವಾಹನ ಗೃಹೋಪಕರಣ ವಸ್ತುಗಳಿಂದ ಲಾಭ. ಉದರ ಸಂಬಂಧೀ ಕಾಯಿಲೆಗಳ ಬಗ್ಗೆ ಎಚ್ಚರ.

Advertisement

ಸಿಂಹ: ತೀಕ್ಷ್ಣ ಗುರಿ ನಡೆಯಿಂದ ದಿನಚರಿ ಆರಂಭಿಸಬೇಡಿ. ತಾಳ್ಮೆ ಇರಲಿ. ಕೋರ್ಟು, ರಾಜಕೀಯ ಕ್ಷೇತ್ರದಲ್ಲಿ ಅನುಕೂಲ. ಚಿಕ್ಕ ಪ್ರಯಾಣದಿಂದ ಸಂತಸ. ಉದ್ಯೋಗ ಧನಾಗಮದಲ್ಲಿ ವೃದ್ಧಿ. ಮಾನಸಿಕವಾಗಿ ದೃಢವಾಗಿರಿ.

ಕನ್ಯಾ: ಅನಿರೀಕ್ಷಿತ ಸ್ಥಾನ ಗೌರವದ ಸುಖ. ಹಣಕಾಸಿನ ವಿಚಾರದಲ್ಲಿ ಹಿಡಿತವಿರಲಿ. ಹಿರಿಯರ ಆರೋಗ್ಯದ ವಿಚಾರದಲ್ಲಿ ಗಮನವಿರಲಿ. ಆರೋಗ್ಯ ವಿಷಯದಲ್ಲಿ ಮುಂಜಾಗ್ರತೆ ವಹಿಸುವುದು ಉತ್ತಮ. ಮನೆಯಲ್ಲಿ ಚರ್ಚೆಗೆ ಅವಕಾಶ ನೀಡದಿರಿ.

ತುಲಾ: ಉದ್ಯೋಗ ಸ್ಥಾನಮಾನ, ಧನ ಸಂಪಾದನೆ ವಿಚಾರದಲ್ಲಿ ಸ್ವಲ್ಪ ಅಭಿವೃದ್ಧಿ. ಬಂದ ಅವಕಾಶವನ್ನು ಸದುಪಯೋಗಿಸಿಕೊಳ್ಳಿ. ನಿಮ್ಮ ವಿನಯ ನಮ್ರತೆಯ ಸ್ವಭಾವದಿಂದ ಎಲ್ಲರ ಮೆಚ್ಚುಗೆ ಸಂಪಾದಿಸುವ ದಿನ.

ವೃಶ್ಚಿಕ: ಗುರುಹಿರಿಯರ ಅತ್ಯುತ್ತಮ ಮಾರ್ಗದರ್ಶನ ಸಲಹೆ ಪ್ರಾಪ್ತಿ. ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ. ಪ್ರಯಾಣ, ಉದ್ಯೋಗ, ಧನ ಸಂಪಾದನೆ ವಿಚಾರದಲ್ಲಿ ಅನುಕೂಲಕರ ವಾತಾವರಣ. ಧಾರ್ಮಿಕ ಕಾರ್ಯದಲ್ಲಿ ಭಾಗಿಯಾದ ತೃಪ್ತಿ.

ಧನು: ವಿಚಾರ ವಿನಿಮಯದಲ್ಲಿ ಚರ್ಚೆಗೆ ಅವಕಾಶ ಕೊಡಬೇಡಿ. ನಿರೀಕ್ಷಿತ ಕೆಲಸಕಾರ್ಯ ಗಳಲ್ಲಿ ಜಯ. ಧನಾರ್ಜನೆಗೆ ತಕ್ಕ ಹಾಗೆ ಖರ್ಚು. ಮಾನಸಿಕ ಹಾಗೂ ದೈಹಿಕ ನೆಮ್ಮದಿಗಾಗಿ ಶ್ರೀ ದೇವತಾ ಸ್ಥಳ ಸಂದರ್ಶನ.

ಮಕರ: ಆರೋಗ್ಯ ನಿರ್ಲಕ್ಷಿಸಬೇಡಿ. ಪಾಲುದಾರಿಕಾ ವ್ಯವಹಾರದಲ್ಲಿ ಎಚ್ಚರವಿರಲಿ. ಉದ್ಯೋಗ ಕ್ಷೇತ್ರದಲ್ಲಿ ಅಧಿಕ ಶ್ರಮವಿದ್ದರೂ ಅಂತಿಮವಾಗಿ ಗುರಿ ಸಾಧಿಸುವಿರಿ. ಅವಿವಾಹಿತರಿಗೆ ಕಂಕಣ ಭಾಗ್ಯ ಒದಗಿ ಬರುವ ಸಮಯ.

ಕುಂಭ: ಅನಿರೀಕ್ಷಿತ ಪ್ರಯಾಣ. ದೂರ ವ್ಯವಹಾರದಲ್ಲಿ ಪ್ರಗತಿ. ಧನಾಗಮನಕ್ಕೆ ಕೊರತೆ ಇರದು. ಮಿತ್ರರಲ್ಲಿ ನಿಷ್ಠೂರ ಬೇಡ. ಗೃಹದಲ್ಲಿ ಅಶಾಂತಿಗೆ ಅವಕಾಶ ನೀಡದಿರಿ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಮಕ್ಕಳೊಂದಿಗೆ ಪ್ರೀತಿಯಿಂದ ವ್ಯವಹರಿಸಿ.

ಮೀನ: ವಿದ್ಯಾರ್ಥಿಗಳು ಆತುರದ ನಿರ್ಧಾರ ಮಾಡದಿರಿ. ಆರೋಗ್ಯದ ಕಡೆ ಗಮನಹರಿಸಿ. ಮಾನಸಿಕ ಗೊಂದಲಕ್ಕೆ ಅವಕಾಶ ನೀಡಬೇಡಿ. ಯಾರೊಂದಿಗೂ ಅನಾವಶ್ಯಕ ಚರ್ಚೆಗೆ ಆಸ್ಪದ ಕೊಡಬೇಡಿ. ಮನೆಯಲ್ಲಿ ಹಿರಿಯರೊಂದಿಗೆ ಗೌರವಯುತವಾಗಿ ನಡೆದುಕೊಳ್ಳಿ.

Advertisement

Udayavani is now on Telegram. Click here to join our channel and stay updated with the latest news.

Next