Advertisement

ಗ್ರಹಬಲ: ಈ ರಾಶಿಯವರಿಗಿಂದು ಮಿತ್ರನಿಂದ ಸಹಾಯ ತೋರಿಬಂದು ಆಪತ್ಕಾಲದಲ್ಲಿ ರಕ್ಷಣೆ ಸಿಗಲಿದೆ

07:55 AM Jan 11, 2021 | Team Udayavani |

11-01-2021

Advertisement

ಮೇಷ: ಕಫ‌ ದೋಷದಿಂದ ಯಾ ಉದರ ವ್ಯಾಧಿ ಯಾ ಅಜೀರ್ಣದ ಉಪದ್ರವದಿಂದ ನಿಮಗೆ ಆರೋಗ್ಯವು ಸರಿ ಇರದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಸ್ವಲ್ಪ ಕೊರತೆ ಕಂಡುಬರಲಿದೆ. ಆದಾಯ ವೃದ್ಧಿ ಇದ್ದರೂ ಖರ್ಚು ಅಷ್ಟೇ ಕಂಡುಬರುವುದು.

ವೃಷಭ: ವಿಲಾಸೀ ಸಾಮಾಗ್ರಿಗಳ ಖರೀದಿ ಕಂಡುಬರುವುದು. ತರಕಾರಿ ವ್ಯಾಪಾರದವರಿಗೆ ಲಾಭ, ನಷ್ಟಗಳು ಸಮವಾಗಿರುವುದು. ಮತ್ಸೋದ್ಯಮದವರಿಗೆ ಪ್ರಗತಿ ಇದ್ದರೂ ವ್ಯಾಪಾರವು ಏಳುಬೀಳು ಕಂಡುಬರುವುದು.

ಮಿಥುನ: ಸುಖ, ಸಂತೋಷಗಳು ಇದ್ದು ಸಮೃದ್ಧಿ ಕಂಡುಬರುವುದು. ಯಾತ್ರಾಸ್ಥಳಗಳ ಭೇಟಿ ಮಾಡುವಿರಿ. ಕಫ‌ ದೋಷವು ಕಂಡುಬರುವುದು. ಗೃಹ ನಿರ್ಮಾಣದಂತಹ ಕಾರ್ಯಕ್ಕೆ ಕೈ ಹಾಕುವಿರಿ. ಮುಂಭಡ್ತಿ ಇದೆ.

ಕರ್ಕ: ನಿರುದ್ಯೋಗಿಗಳಿಗೆ ಉದ್ಯೋಗ ದೊರೆತು ಸಮಾಧಾನವಾಗಲಿದೆ. ಕೆಲವು ಕೆಲಸಗಳು ಸಲೀಸಾಗಿ ನಡೆದುಹೋಗಲಿದೆ. ಕಾರ್ಯಕ್ಷೇತ್ರದಲ್ಲಿ ಮೇಲಾಧಿಕಾರಿಗಳಿಗೆ ಸಹಕಾರ ಲಭಿಸಲಿದೆ. ಹಗಲಿರುಳು ದುಡಿದರೂ ಲಾಭಾಂಶ ಕಡಿಮೆ.

Advertisement

ಸಿಂಹ: ಪ್ರಯಾಣದಲ್ಲಿ ಕಳ್ಳಕಾಕರ ಭೀತಿ ಕಂಡುಬರಲಿದೆ. ಕಾರ್ಯಬಾಹುಳ್ಯದಿಂದ ಚಿತ್ತಕ್ಷೋಭೆಯಾದೀತು. ಕೈಕೆಳಗಿನ ಕೆಲಸಗಾರರಿಂದ ಅಸಹಕಾರ ಕಂಡುಬಂದೀತು. ಹಣ್ಣು ಹಂಪಲು, ಸಿಹಿ ತಿಂಡಿ, ಪಾನೀಯದವರಿಗೆ ಲಾಭವಿದೆ.

ಕನ್ಯಾ: ಆಹಾರ ಧಾನ್ಯಗಳಿಂದ ಲಾಭಾಂಶ ಕಂಡುಬರುವುದು. ಕುಂಭಾರ, ಗುಡಿಕೈಗಾರಿಕೆಯವರಿಗೆ ಪ್ರೋತ್ಸಾಹ ದೊರಕಲಿದೆ. ಕಾಳು, ಸಾಂಬಾರು ಪದಾರ್ಥ ವ್ಯಾಪಾರಿಗಳಿಗೆ ಎಣಿಕೆಯಂತೆ ವ್ಯಾಪಾರ ನಡೆಯದು. ಶುಭವಿದೆ.

ತುಲಾ: ನೂತನ ಕಾರ್ಯಾರಂಭವು ವಿಘ್ನ ಭೀತಿಯಿಂದ ನಡೆದೀತು. ಆದರೆ ಧೈರ್ಯ, ಆತ್ಮವಿಶ್ವಾಸವು ನಿಮ್ಮನ್ನು ಕಾಪಾಡಲಿದೆ. ಚಿತ್ರೋದ್ಯಮ, ಸಂಗೀತ, ನರ್ತನ ಮುಂತಾದವುಗಳಿಗೆ ವಿಶೇಷ ಕೀರ್ತಿ, ಪುರಸ್ಕಾರ ಲಭಿಸಲಿದೆ.

ವೃಶ್ಚಿಕ: ಸಾಗರೋದ್ಯಮಿಗಳಿಗೆ ಸರಿಯಾದ ಲಾಭವಿರದು. ಕರಕುಶಲ ಕಲೆ, ಕಟ್ಟಡ ಸಾಮಾಗ್ರಿಗಳ ತಯಾರಿಕೆಗಳಿಗೆ ಹಾಗೂ ಯಂತ್ರ ಸ್ಥಾವರ ಕೆಲಸದವರಿಗೆ ಚೆನ್ನಾಗಿ ಆದಾಯ ಬರುವುದು. ಆರೋಗ್ಯ ಮಾತ್ರ ಹದಗೆಡಲಿದೆ ಜಾಗ್ರತೆ.

ಧನು: ಗಣಿ ಕೆಲಸಗಾರರಿಗೆ ಕಾರ್ಯದ ಒತ್ತಡ ಹೆಚ್ಚಲಿದೆ ಹೊರತು ಲಾಭವಿರದು. ಕಠಿಣ ಪರಿಶ್ರಮ ಕೈಗೊಂಡರೂ ಅಷ್ಟಕಷ್ಟೇ. ನ್ಯಾಯಾಲಯದಲ್ಲಿ ವಾದ ವಿವಾದಗಳು ಮುಗಿದಾವು. ಸಂಚಾರದಲ್ಲಿ ಜಾಗ್ರತೆ ಮಾಡಿರಿ.

ಮಕರ: ಪ್ರಯಾಣದಲ್ಲಿ ಆಯಾಸವು ಕಂಡುಬರಲಿದೆ. ಹಿರಿಯರಿಂದ ಅರ್ಥಿಕ ಲಾಭ ದೊರೆತು ಸಮಾಧಾನವಾಗಲಿದೆ. ಮನದನ್ನೆಯ ಮಾತು ಹಿತ ತರಲಿದೆ. ಅಧಿಕಾರಿ ವರ್ಗದಲ್ಲಿ ಭಿನ್ನಮತ ಕಂಡುಬಂದು ತಲೆಕೆಟ್ಟೀತು.

ಕುಂಭ: ಮನೆಯಲ್ಲಿ ತಂದೆಯ ಆರೋಗ್ಯ ಸುಧಾರಣೆಗಾಗಿ ಖರ್ಚು ಕಂಡುಬಂದೀತು. ಮಕ್ಕಳ ವಿದ್ಯೆಗಾಗಿ ಖರ್ಚು ತೋರಿಬರಲಿದೆ. ಮಿತ್ರನಿಂದ ಸಹಾಯ ತೋರಿಬಂದು ಆಪತ್ಕಾಲದಲ್ಲಿ ರಕ್ಷಣೆ ಸಿಗಲಿದೆ. ಪ್ರಯಾಣ ಕಂಡುಬಂದೀತು.

ಮೀನ: ರಕ್ಷಣೆ ಹಾಗೂ ಶಿಕ್ಷಣಾ ವರ್ಗದವರಿಗೆ ಕ್ಲೇಶ ಹೆಚ್ಚಲಿದೆ. ಎಣಿಕೆಯಂತೆ ಕಾರ್ಯಸಾಧನೆ ಇರುವುದಿಲ್ಲ. ಆರೋಗ್ಯವು ಸಾಮಾನ್ಯವಾಗಿರುವುದು. ಕಾರ್ಯಸಿದ್ಧಿ ಇರುವುದು. ಗೃಹದಲ್ಲಿ ಸಂತೋಷದ ಸಮಾರಂಭವಿದೆ.

ಎನ್.ಎಸ್.ಭಟ್

Advertisement

Udayavani is now on Telegram. Click here to join our channel and stay updated with the latest news.

Next