Advertisement

ಪರಿಷತ್‌ ಸದಸ್ಯರ ಧರಣಿ ಸಿಎಂ ಜತೆ ಇಂದು ಮಾತುಕತೆ

07:30 AM Sep 15, 2017 | Team Udayavani |

ಬೆಂಗಳೂರು: ಶಿಕ್ಷಕರು, ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಶಾಲಾ ಆಡಳಿತ ಮಂಡಳಿಗಳ ವಿವಿಧ ಬೇಡಿಕೆ
ಈಡೇರಿಸುವಂತೆ ಒತ್ತಾಯಿಸಿ ವಿಧಾನ ಪರಿಷತ್‌ ಸದಸ್ಯರು ಕಳೆದ 6 ದಿನದಿಂದ ನಡೆಸುತ್ತಿರುವ ಅಹೋರಾತ್ರಿ ಧರಣಿ
ಶುಕ್ರವಾರವೂ ಮುಂದುವರಿಯಲಿದೆ. ಈ ಕುರಿತು ಮುಖ್ಯಮಂತ್ರಿಗಳು ವಿಧಾನಪರಿಷತ್‌ ಸದಸ್ಯರ ಪೂರ್ವಭಾವಿ ಸಮಾಲೋಚನೆಯನ್ನೂ ನಡೆಸಿದ್ದಾರೆ.

Advertisement

ಶುಕ್ರವಾರ ಸಂಜೆ 4 ಗಂಟೆ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಚರ್ಚೆಗೆ ಆಹ್ವಾನಿಸಿದ್ದು, ಮಾತುಕತೆ
ವಿಫ‌ಲವಾದರೆ ರಾಜ್ಯಾದ್ಯಂತ ಮುಷ್ಕರ, ಎರಡು ಲಕ್ಷ ಶಿಕ್ಷಕರು, ಉಪನ್ಯಾಸಕರು, ಬೋಧಕೇತರ ಸಿಬ್ಬಂದಿಯಿಂದ ವಿಧಾನಸೌಧ ಮುತ್ತಿಗೆ, ಶಾಲಾ-ಕಾಲೇಜು ಬಂದ್‌ ಸೇರಿ ವಿವಿಧ ಹಂತದ ಪ್ರತಿಭಟನೆ ಸ್ವರೂಪ ಪಡೆಯುವ ಸಾಧ್ಯತೆಯಿದೆ. ಮುಖ್ಯಮಂತ್ರಿಗಳು ಚರ್ಚೆಗೆ ಆಹ್ವಾನಿಸಿರುವ ಹಿನ್ನೆಲೆಯಲ್ಲಿ ಗುರುವಾರ ಬಸವರಾಜ ಹೊರಟ್ಟಿ, ಪುಟ್ಟಣ್ಣ ಅವರ ನೇತೃತ್ವದಲ್ಲಿ 13 ವಿಧಾನಪರಿಷತ್‌ ಸದಸ್ಯರು ಪೂರ್ವಭಾವಿ ಸಮಾಲೋಚನೆ ನಡೆಸಿದರು.

ನಂತರ ಸುದ್ದಿಗಾರರ ಜತೆ ಮಾನಾಡಿದ ಜೆಡಿಎಸ್‌ನ ರಮೇಶ್‌ಬಾಬು, ನಾವು ಸರ್ಕಾರದ ಮುಂದೆ 37 ಬೇಡಿಕೆ ಇಟ್ಟಿದ್ದೇವೆ. ಆ ಪೈಕಿ ಶೇ.60 ರಷ್ಟು ಸರ್ಕಾರದ ಆದೇಶಗಳ ಮೂಲಕ ಬಗೆಹರಿಯಲಿದೆ. ಉಳಿದ ಕೆಲವು ಬೇಡಿಕೆಗಳಿಗೆ ಆರ್ಥಿಕ ಇಲಾಖೆ ಒಪ್ಪಿಗೆ ಬೇಕಾಗಿದೆ. ನಮ್ಮ ಬೇಡಿಕೆ‌ ಈಡೇರದಿದ್ದರೆ ರಾಜ್ಯಾದ್ಯಂತ ಮುಷ್ಕರ, ವಿಧಾನಸೌಧ ಮುತ್ತಿಗೆ, ಶಾಲಾ-ಕಾಲೇಜು ಬಂದ್‌ ಬಗ್ಗೆಯೂ ಚರ್ಚೆ ನಡೆದಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next