Advertisement

ಶಶಿ ತರೂರ್‌ ಸಭೆ: ಕೇವಲ 12 ಸದಸ್ಯರು ಹಾಜರು

10:45 PM Oct 07, 2022 | Team Udayavani |

ಚೆನ್ನೈ: ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಹಿರಿಯ ನಾಯಕ ಶಶಿ ತರೂರ್‌  ಚೆನ್ನೈನ ಕಾಂಗ್ರೆಸ್‌ ಪ್ರಧಾನ ಕಚೇರಿಯಲ್ಲಿ ಕರೆದಿದ್ದ ಸಭೆಯಲ್ಲಿ ಕೇವಲ 12 ಮಂದಿ ಭಾಗವಹಿಸಿದ್ದ ಘಟನೆ ನಡೆದಿದೆ.

Advertisement

ತಮಿಳುನಾಡು ಕಾಂಗ್ರೆಸ್‌ ಘಟಕದ 700 ಪ್ರಮುಖ ನಾಯಕರಿಗೆ ಆಹ್ವಾನ ನೀಡಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತರೂರ್‌ “ಸಭೆಯಲ್ಲಿ ಭವಿಷ್ಯದ ಉತ್ತಮ ಅಂಶಗಳ ಬಗ್ಗೆ ಚರ್ಚಿಸಬೇಕೆಂದುಕೊಂಡಿದ್ದೆ. ಅವರು ಸಭೆಗೆ ಬಂದಿಲ್ಲವೆಂದರೆ ಅವರಿಗೇ ನಷ್ಟ ಹೊರತು, ನನಗಲ್ಲ’ ಎಂದಿದ್ದಾರೆ.

ಇದೇ ವೇಳೆ, ತಮಿಳುನಾಡು ಕಾಂಗ್ರೆಸ್‌ ಘಟದ ಕೆಲವು ನಾಯಕರು “ಎನ್‌ಡಿಟಿವಿ’ ಜತೆಗೆ ಮಾತನಾಡಿ “ಒಂದು ವೇಳೆ ಶಶಿ ತರೂರ್‌ ಅವರ ಸಭೆಗೆ ಹಾಜರಾದರೆ ನಾವು ಪಕ್ಷದ ಅಧಿಕೃತ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಖರ್ಗೆ ಅವರನ್ನು ವಿರೋಧಿಸಿದಂತಾಗುತ್ತದೆ. ಖರ್ಗೆ ಅವರಿಗೆ ಗಾಂಧಿ ಕುಟುಂಬದ ಬೆಂಬಲವಿದೆ’ ಎಂದು ಪ್ರತಿಪಾದಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next