Advertisement

 500 ವರ್ಷ ಹಳೆಯ ನಟರಾಜ ಪ್ರತಿಮೆಯ ಹರಾಜು ಸ್ಥಗಿತ

10:02 PM Dec 16, 2022 | Team Udayavani |

ಚೆನ್ನೈ: ತಮಿಳುನಾಡು ಪೊಲೀಸರ ಪ್ರಯತ್ನದಿಂದ 500 ವರ್ಷ ಹಳೆಯ ನಟರಾಜ ಪ್ರತಿಮೆಯ ಹರಾಜು ಪ್ರಕ್ರಿಯೆಯನ್ನು ಪ್ರಸಿದ್ಧ ಅಂತಾರಾಷ್ಟ್ರೀಯ ಹರಾಜು ಸಂಸ್ಥೆ ಫ್ರಾನ್ಸ್‌ನ “ಕ್ರಿಸ್ಟೀಸ್‌’ ತಡೆಹಿಡಿದಿದೆ.

Advertisement

ತಮಿಳುನಾಡಿನ ತೂತುಕುಡಿ ಜಿಲ್ಲೆಯ ಕೋವಿಲ್‌ಪಟ್ಟಿಯ ಪುರಾತನ ಶ್ರೀ ಕೋದಂಡ ರಾಮೇಶ್ವರ ದೇಗುಲದಿಂದ ಈ ನಟರಾಜ ವಿಗ್ರಹವನ್ನು 1972ರಲ್ಲಿ ಕಳವು ಮಾಡಲಾಗಿತ್ತು.

ತಮಿಳುನಾಡು ಪೊಲೀಸರ ಈ ಕಾರ್ಯವನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಶ್ಲಾಘಿಸಿದ್ದಾರೆ.

ಡಿ.13ರಂದು ಹರಾಜು ಬಿಡ್‌ನ‌ಲ್ಲಿ 2ರಿಂದ 3 ಲಕ್ಷ ಯೂರೋಗಳಿಗೆ ಪ್ರತಿಮೆಯನ್ನು ಮಾರಾಟ ಮಾಡಲು ಕ್ರಿಸ್ಟೀಸ್‌ ಸಂಸ್ಥೆ ಮುಂದಾಗಿತ್ತು. ಆದರೆ ಈ ಪ್ರತಿಮೆಯ ಹರಾಜು ನಿಲ್ಲಿಸುವಂತೆ ಭಾರತೀಯ ಪುರಾತತ್ವ ಇಲಾಖೆ ಅಂತಾರಾಷ್ಟ್ರೀಯ ಅಭಿಯಾನ ಆರಂಭಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next