Advertisement

ತಮಿಳು ನಾಡು : ನಾಳೆಯಿಂದ 27 ಜಿಲ್ಲೆಗಳಲ್ಲಿ ಮೊದಲ ಹಂತದ ಅನ್ ಲಾಕ್ ಘೋಷಿಸಿದ ಸರ್ಕಾರ

08:29 PM Jun 13, 2021 | Team Udayavani |

ಚೆನ್ನೈ : ಕೋವಿಡ್ ಸೋಂಕಿನ ನಿರಂತರ ಇಳಿಮುಖವಾಗುತ್ತಿರುವ ಹಿನ್ನಲೆಯಲ್ಲಿ ತಮಿಳು ನಾಡಿನ 27 ಜಿಲ್ಲೆಗಳಲ್ಲಿ ನಾಳೆಯಿಂದ(ಜೂನ್ 14) ಲಾಕ್ ಡೌನ್ ಸಡಿಲಗೊಳಿಸಿ ಅಲಲಿನ ಸರ್ಕಾರ ಾದೇಶ ಹೊರಡಿಸಿದೆ.

Advertisement

27 ಜಿಲ್ಲೆಗಳನ್ನು ಹೊರತಾಗಿ ಉಳಿದ ಇತರೆ 11 ಜಿಲ್ಲೆಗಳಲ್ಲಿ ಕೋವಿಡ್ ಸೋಂಕಿನ ಹೊಸ ಪ್ರಕರಣಗಳಲ್ಲಿ ಇಳಿಮುಖ ಕಂಡುಬಂದಿಲ್ಲವಾದ್ದರಿಂದ ಕಠಿಣ ಲಾಕ್‌ ಡೌನ್ ಮುಂದುವರಿಯಲಿದೆ ಎಂದು ಸ್ಟ್ಯಾಲಿನ್ ನೇತೃತ್ವದ ಸರ್ಕಾರ ಮಾಹಿತಿ ನೀಡಿದೆ.

ಇದನ್ನೂ ಓದಿ : ಬಿಜೆಪಿಯ ಮಾಜಿ ಶಾಸಕ ಜಿ.ವೀರಪ್ಪ ನಿವಾಸಕ್ಕೆ ಎಚ್.ಆರ್.ಶ್ರೀನಾಥ್ ಭೇಟಿ, ರಾಜಕೀಯ ಚರ್ಚೆ

ಟೀ ಶಾಪ್‌ ತೆರೆಯಲು ಅನುಮತಿಸಿರುವುದನ್ನು ಒಳಗೊಂಡು ಹಲವು ನಿರ್ಬಂಧಗಳನ್ನು ಸಡಿಲಿಕೆ ಮಾಡಿ ಘೋಷಣೆ ಮಾಡಿದೆ.

ಇನ್ನು, ಚೆನ್ನೈ ನಗರವನ್ನು ಸೇರಿದಂತೆ ಈ 27 ಜಿಲ್ಲೆಗಳಲ್ಲಿ ಟೀ ಶಾಪ್‌ ಗಳನ್ನು ಬೆಳಿಗ್ಗೆ 6 ರಿಂದ ಸಂಜೆ 5ರವರೆಗೂ ತೆರೆಯಲು ಅವಕಾಶ ಕೊಟ್ಟಿದ್ದು, ಪಾರ್ಸಲ್‌ ಗೆ ಅವಕಾಶವಿದೆ. ಬಿಸಿ ಪಾನೀಯ ಒಯ್ಯಲು ಪಾತ್ರೆ ಬಳಸಬೇಕು. ಆದಷ್ಟು ಪ್ಲಾಸ್ಟಿಕ್‌ ಬ್ಯಾಗ್‌ ಬಳಕೆ ತಪ್ಪಿಸಬೇಕು ಎಂದು ಸರ್ಕಾರ ಮಾರ್ಗ ಸೂಚಿಯ ಮೂಲಕ ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದೆ.

Advertisement

ಮೊದಲ ಹಂತದ ಅನ್ ಲಾಕ್ ಘೋಷಣೆ ಮಾಡಿರುವ ತಮಿಳು ನಾಡು ಸರ್ಕಾರ, ಸಿಹಿ ಮತ್ತು ಖಾರದ ತಿನಿಸು ಮಾರುವ ಅಂಗಡಿಗಳಿಗೆ ಬೆಳಿಗ್ಗೆ 8 ರಿಂದ ಮಧ್ಯಾಹ್ನ 2ರವರೆಗೆ ತೆರೆಯಲು ಅನುಮತಿ ನೀಡಿದ್ದು, ಕೇವಲ ಪಾರ್ಸಲ್‌ ಒಯ್ಯಬಹುದು ಎಂದು ತಿಳಿಸಲಾಗಿದೆ.

ತಮಿಳುನಾಡಿನಲ್ಲಿ ಟೀ ಶಾಪ್‌ಗಳು ಅಧಿಕ ಸಂಖ್ಯೆಯಲ್ಲಿದ್ದು, ಲಾಕ್‌ ಡೌನ್‌ ಕಾರಣ ಮೇ 10ರಿಂದ ಬಂದ್ ಆಗಿವೆ. ಉಳಿದಂತೆ, ರೆಸ್ಟೋರಂಟ್‌ ಗಳು ಮತ್ತು ಬೇಕರಿಗಳು ಈಗಾಗಲೇ ವಹಿವಾಟು ನಡೆಸುತ್ತಿವೆ. ಸರ್ಕಾರಿ ಸೇವೆ ನಿರೀಕ್ಷಿಸುತ್ತಿರುವ ಜನರಿಗೆ ನೆರವಾಗಲು, ಇ–ಸರ್ವೀಸ್‌ ಸೆಂಟರ್‌ ತೆರೆಯಲು ಅನುಮತಿಸಲಾಗಿದೆ.

ಇದನ್ನೂ ಓದಿ :  ಬೆಳಕು, ಕತ್ತಲೆಗಳ ಘರ್ಷಣೆಯಿಂದ ಹೊರಬಂದ ಹಾಡು ‘ಮರಳಿ ಬಾ ಮನ್ವಂತರವೇ ಕಂಬನಿಗಳ ಬಳಿಗೆ..

Advertisement

Udayavani is now on Telegram. Click here to join our channel and stay updated with the latest news.

Next