Advertisement

ಪಾರ್ಥ ಚಟರ್ಜಿ ಪ್ರಕರಣದಲ್ಲಿ ಹಸ್ತಕ್ಷೇಪ ಇಲ್ಲ: ಟಿಎಂಸಿ ಸ್ಪಷ್ಟನೆ

10:10 PM Jul 24, 2022 | Team Udayavani |

ಕೋಲ್ಕತಾ: ಶಿಕ್ಷಕರ ನೇಮಕದಲ್ಲಿ ಅಕ್ರಮ ಎಸಗಿ ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿರುವ ಸಚಿವ ಪಾರ್ಥ ಚಟರ್ಜಿ ತನಿಖೆ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಆದರೆ, ಕಾಲಮಿತಿಯಲ್ಲಿ ತನಿಖೆಯನ್ನು ಪೂರ್ತಿಗೊಳಿಸಬೇಕು ಎಂದು ತೃಣಮೂಲ ಕಾಂಗ್ರೆಸ್‌ ವಕ್ತಾರ ಕುನಾಲ್‌ ಘೋಷ್‌ ಹೇಳಿದ್ದಾರೆ.

Advertisement

ಸದ್ಯದ ಬೆಳವಣಿಗೆಯಿಂದ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರಕ್ಕೆ ಭಾರೀ ಮುಜುಗರ ಉಂಟಾಗಿದೆ. ಸಚಿವರ ಜತೆಗೆ ಇದ್ದ ಮಹಿಳೆಗೂ ಪಕ್ಷಕ್ಕೂ ಯಾವುದೇ ರೀತಿಯ ಸಂಬಂಧ ಇಲ್ಲ ಎಂದು ಅವರು ಹೇಳಿ ಕೊಂಡಿದ್ದಾರೆ. ಕಾನೂನು ತನ್ನದೇ ಆಗಿ ರುವ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತದೆಯಾದರೂ, ಸದರಿ ಪ್ರಕರಣದಲ್ಲಿ ನಿಗದಿತ ಕಾಲಮಿತಿಯಲ್ಲಿ ತನಿಖೆ ಮುಕ್ತಾಯ ಗೊಳಿಸಬೇಕು ಎಂದು ಒತ್ತಾಯಿಸಿದರು.

ಡಾನ್‌ ರೀತಿ ವರ್ತನೆ: ಬಂಧಿತ ಸಚಿವ ಪಾರ್ಥ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾ ಸಣೆ ವೇಳೆ ಡಾನ್‌ನಂತೆ ವರ್ತಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಕೋಲ್ಕತಾ ಹೈಕೋರ್ಟ್‌ನಲ್ಲಿ ಆರೋಪಿ ಸಿದೆ. ತನಿಖೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಸಚಿವರು ಅನಾರೋಗ್ಯ ಇರುವ ಬಗ್ಗೆ ನಟಿಸುತ್ತಿದ್ದಾರೆ ಎಂದು ದೂರಿದೆ.

ಒಂದು ದಿನ ವಶಕ್ಕೆ: ಸಚಿವ ಪಾರ್ಥ ಚಟರ್ಜಿ ನಿಕಟವರ್ತಿ ಮಹಿಳೆ ಅರ್ಪಿತಾ ಮುಖರ್ಜಿ ಎಂಬಾಕೆಯನ್ನು ಕೋಲ್ಕತಾದ ಕೋರ್ಟ್‌ ಒಂದು ದಿನದ ಮಟ್ಟಿಗೆ ವಿಚಾ ರಣೆಗಾಗಿ ಇ.ಡಿ. ವಶಕ್ಕೆ ಒಪ್ಪಿಸಿ ಆದೇಶಿ ಸಿದೆ. ಆಕೆಯನ್ನು ಸೋಮವಾರ ಮತ್ತೆ ಕೋರ್ಟ್‌ಗೆ ಹಾಜರುಪಡಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next