Advertisement

ತಿರುಮಲದಲ್ಲಿ 21, 22ರಂದು ವಿಐಪಿ ದರ್ಶನ ಇಲ್ಲ: ಟಿಟಿಡಿ ಟ್ರಸ್ಟ್‌ ಹೇಳಿಕೆ

10:21 PM Mar 12, 2023 | Team Udayavani |

ತಿರುಪತಿ: ಆಂಧ್ರ ಪ್ರದೇಶದ ತಿರುಪತಿಯ ತಿರುಮಲ ಶ್ರೀ ವೆಂಕಟೇಶ್ವರ ದೇಗುಲದಲ್ಲಿ ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಮಾ.21 ಮತ್ತು 22ರಂದು ವಿಐಪಿ ದರ್ಶನ ಇರುವುದಿಲ್ಲ ಎಂದು ತಿರುಮಲ ತಿರುಪತಿ ದೇವಸ್ಥಾನಗಳು(ಟಿಟಿಡಿ) ಟ್ರಸ್ಟ್‌ ತಿಳಿಸಿದೆ.

Advertisement

ಶೋಭಕೃತ ನಾಮ ಸಂವತ್ಸರ ಚೈತ್ರ ಶುದ್ಧ ಪಾಡ್ಯಮಿ ದಿನವಾದ ಮಾ.22ರಂದು ಶ್ರೀ ವೆಂಕಟೇಶ್ವರ ದೇಗುಲದಲ್ಲಿ ಟಿಟಿಡಿ ವತಿಯಿಂದ ಯುಗಾದಿ ಅಷ್ಟನಾಮ ಏರ್ಪಡಿಸಲಾಗಿದೆ.

ಸಾಂಪ್ರದಾಯಿಕ ಆಚರಣೆಯ ಪ್ರಕಾರ, ಹಿಂದಿನ ದಿನವಾದ ಮಾ.21ರಂದು ದೇವಸ್ಥಾನದ ಆವರಣದಲ್ಲಿರುವ ಕೋಯಿಲ್‌ ಆಳ್ವಾರ್‌ ತಿರುಮಂಜನಂ ದೇಗುಲವನ್ನು ಸ್ವತ್ಛಗೊಳಿಸಲಾಗುತ್ತದೆ. ಮಾ.22ರಂದು ದೇಗುಲದಲ್ಲಿ ಏಕಾಂತದಲ್ಲಿ ಆರ್ಜಿತ ಸೇವೆಗಳನ್ನು ಸಲ್ಲಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಎರಡು ದಿನಗಳಂದು ತಾತ್ಕಲಿಕವಾಗಿ ವಿಐಪಿ ದರ್ಶನವನ್ನು ರದ್ದುಪಡಿಸಲಾಗಿದೆ ಎಂದು ಟಿಟಿಡಿ ಮಾಹಿತಿ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next