Advertisement

ಹನುಮಂತನ ಜನ್ಮಸ್ಥಳದಲ್ಲಿ ಭೂಮಿಪೂಜೆ

11:40 PM Feb 16, 2022 | Team Udayavani |

ತಿರುಮಲ: ಹನುಮಾನ್‌ ಜನ್ಮಸ್ಥಳವೆಂದು ಪರಿಗಣಿಸಲ್ಪಟ್ಟಿರುವ ತಿರುಮಲದ ಆಕಾಶ­ಗಂಗಾ ಪ್ರಾಂತ್ಯದಲ್ಲಿ ವಿವಿಧ ಅಭಿವೃದ್ಧಿ ಯೋಜ ನೆ­ಗಳಿಗೆ ಭೂಮಿ ಪೂಜೆ ನೆರವೇರಿಸಲಾಯಿತು.

Advertisement

ಸಮಾರಂಭದಲ್ಲಿ ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್‌ನ (ಟಿಟಿಡಿ) ಮುಖ್ಯಸ್ಥ ವೈ.ವಿ. ಸುಬ್ಟಾ ರೆಡ್ಡಿ, ವಿಕಾಸಶ್ರೀ ಪೀಠನ ಸ್ವಾಮೀಜಿ ಸ್ವರೂಪಾನಂದೇಶ್ವರ ಸರಸ್ವತಿ ಸ್ವಾಮಿ ಮುಂತಾದವರು ಭಾಗವಹಿಸಿದ್ದರು.

ಸಮಾರಂಭದ ಅನಂತರ ಮಾತನಾಡಿದ ಸ್ವರೂಪಾನಂದೇಶ್ವರ ಸರಸ್ವತಿ, “”ಹನು­ಮಂತನ ಜನ್ಮಸ್ಥಳವೆಂದು ಗುರುತಿಸಲಾಗಿ­ರುವ ಜಾಗವನ್ನು ಅಭಿವೃದ್ಧಿಪಡಿಸಲಾ­ಗುತ್ತದೆ.

ಇದನ್ನೂ ಓದಿ:ತೆರಿಗೆ ವಂಚನೆ ಆರೋಪ; ಚೀನದ ಹುವಾಯ್‌ ಕಚೇರಿಗಳ ಮೇಲೆ ಐಟಿ ದಾಳಿ

ಆಂಧ್ರಪ್ರದೇಶವು ವೇದಗಳು ರಚನೆ­ಗೊಂಡ ತಾಣ. ತಿರುಮಲದಲ್ಲಿರುವ ಅಂಜನಾದ್ರಿ ಬೆಟ್ಟದಲ್ಲೇ ಹನುಮಂತ ಜನಿಸಿದನೆಂದು ವೇದ ವಿದ್ವಾಂಸರು ಹೇಳಿ­ದ್ದಾರೆ.

Advertisement

ಸಂಶೋಧಕರ ಸಂಶೋಧನ ವರದಿ­ಗಳಲ್ಲಿಯೂ ಇದು ಉಲ್ಲೇಖವಾಗು­ತ್ತವೆ” ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next