Advertisement

Tiruchirappalli; ತರಕಾರಿ ಮಾರಾಟ ಮಾಡಿ ಮತಯಾಚನೆ ಮಾಡುತ್ತಿದ್ದಾರೆ ಪದ್ಮಶ್ರೀ ಪುರಸ್ಕೃತ

08:09 AM Apr 12, 2024 | Team Udayavani |

ತಿರುಚಿರಾಪಳ್ಳಿ: ದೇಶದಲ್ಲಿ ಚುನಾವಣಾ ಪ್ರಚಾರ ಭರಾಟೆ ಜೋರಾಗಿದೆ. ಅಭ್ಯರ್ಥಿಗಳು ರೋಡ್ ಶೋಗಳ ಮೂಲಕ, ದೊಡ್ಡ ಸಮಾವೇಶಗಳ ಮೂಲಕ ಮತಯಾಚನೆ ಮಾಡುತ್ತಿದ್ದಾರೆ. ಆದರೆ ತಮಿಳುನಾಡಿನ ತಿರುಚಿರಾಪಳ್ಳಿಯ ಅಭ್ಯರ್ಥಿಯೊಬ್ಬರು ಮಾರುಕಟ್ಟೆಯಲ್ಲಿ ತರಕಾರಿ ಮಾರಾಟ ಮಾಡಿ ಜನರಲ್ಲಿ ಮತಯಾಚನೆ ಮಾಡುತ್ತಿದ್ದಾರೆ.

Advertisement

ತಿರುಚಿರಾಪಳ್ಳಿ ಮೂಲದ ಎಸ್ ದಾಮೋದರನ್ (62) ಅವರು ಈ ಬಾರಿಯ ಚುನಾವಣೆಯಲ್ಲಿ ಗ್ಯಾಸ್ ಸ್ಟೌವ್ ಚಿಹ್ನೆಯಡಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ನಗರದ ಗಾಂಧಿ ಮಾರುಕಟ್ಟೆಯಲ್ಲಿ ಜನರು ಮತ್ತು ತರಕಾರಿ ಮಾರಾಟಗಾರರಿಂದ ಮತ ಯಾಚಿಸಿದರು.

“ನಾನು ತಿರುಚ್ಚಿ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ. ನಾನು ಈ ಮಣ್ಣಿನ ಮಗ. ನಾನು ತಿರುಚ್ಚಿ ನಗರಕ್ಕೆ ಸೇರಿದವನು. ನಾನು ನೈರ್ಮಲ್ಯ ಕೇಂದ್ರದಲ್ಲಿ ಸಹಾಯಕ ಸೇವಾ ಸ್ವಯಂಸೇವಕನಾಗಿ 40 ವರ್ಷಗಳಿಗೂ ಹೆಚ್ಚು ಕಾಲ ಕೆಲಸ ಮಾಡುತ್ತಿದ್ದೇನೆ. ನಾನು ನನ್ನ ವೃತ್ತಿಜೀವನವನ್ನು ನನ್ನ 21ನೇ ವಯಸ್ಸಿನಲ್ಲಿ ಪ್ರಾರಂಭಿಸಿದೆ. ಈಗ ನನಗೆ 62 ವರ್ಷ. 60 ನೇ ವಯಸ್ಸಿನಲ್ಲಿ, ನೈರ್ಮಲ್ಯ ಕ್ಷೇತ್ರದಲ್ಲಿ ನನ್ನ ಕೆಲಸಕ್ಕಾಗಿ ನಾನು ಅಂದಿನ ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದೇನೆ” ಎಂದು ದಾಮೋದರನ್ ತಮ್ಮ ವೃತ್ತಿಜೀವನದ ಬಗ್ಗೆ ಎಎನ್ಐ ಜೊತೆ ಮಾತನಾಡುತ್ತಾ ಹೇಳಿದರು.

“ನಾನು 21 ನೇ ವಯಸ್ಸಿನಲ್ಲಿ ರಾಜೀವ್ ಗಾಂಧಿ ಭಾರತದ ಪ್ರಧಾನಿಯಾಗಿದ್ದಾಗ ನನ್ನ ಸಮಾಜ ಸೇವೆಯನ್ನು ಪ್ರಾರಂಭಿಸಿದೆ, ನನ್ನ ಜೀವನದಲ್ಲಿ ನಾನು ಒಂಬತ್ತು ಪ್ರಧಾನಿಗಳನ್ನು ಕಂಡಿದ್ದೇನೆ. ನಾನು ಎಲ್ಲಾ ಕೇಂದ್ರ ಪ್ರಾಯೋಜಿತ ಗ್ರಾಮೀಣ ನೈರ್ಮಲ್ಯ ಕಾರ್ಯಕ್ರಮಗಳ ಅಡಿಯಲ್ಲಿ ಕೆಲಸ ಮಾಡಿದ್ದೇನೆ. ಪ್ರತಿ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡಿದ್ದೇನೆ” ಎಂದು ಅವರು ಹೇಳಿದರು.

ತಮ್ಮ ವಿಶಿಷ್ಟ ಪ್ರಚಾರದ ಬಗ್ಗೆ ಮಾತನಾಡಿದ ದಾಮೋದರನ್, “ಇಂದು ನಾನು ನನ್ನ ಸಂಸದೀಯ ಕ್ಷೇತ್ರಕ್ಕೆ ಒಳಪಡುವ ಗಾಂಧಿ ಮಾರ್ಕೆಟ್ ಪ್ರದೇಶದಲ್ಲಿ ನನ್ನ ಪ್ರಚಾರವನ್ನು ಪ್ರಾರಂಭಿಸಿದ್ದೇನೆ, ನಾನು ಹೋದಲ್ಲೆಲ್ಲಾ ನನಗೆ ಅದ್ಭುತ ಸ್ವಾಗತ ಸಿಗುತ್ತಿದೆ” ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next