Advertisement

ಟಿಪ್ಪು ಮೂರ್ತಿ ಪ್ರತಿಷ್ಠಾಪನೆಗೆ ಬಿಡುವುದಿಲ್ಲ: ಮುತಾಲಿಕ್‌

11:06 PM Nov 12, 2022 | Team Udayavani |

ಚಿಕ್ಕಮಗಳೂರು: ನೂರಡಿಯಲ್ಲ, ಒಂದಿಂಚಿನ ಟಿಪ್ಪು ಮೂರ್ತಿಯನ್ನೂ ಮೈಸೂರು ಸಹಿತ ರಾಜ್ಯದ ಯಾವ ಭಾಗದಲ್ಲೂ ಪ್ರತಿಷ್ಠಾಪಿಸಲು ಬಿಡುವುದಿಲ್ಲ ಎಂದು ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಹೇಳಿದರು.

Advertisement

ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಮೈಸೂರು ನಮ್ಮ ಸ್ವಾಭಿಮಾನದ ಸಾಂಸ್ಕೃತಿಕ ಕೇಂದ್ರ. ಮೈಸೂರು ಮಹಾರಾಣಿಯನ್ನು ಟಿಪ್ಪು ಸುಲ್ತಾನ್‌ ಮೋಸದಿಂದ ಬಂಧಿ ಸಿ ರಾಜ್ಯಭಾರ ಮಾಡಿದ ವ್ಯಕ್ತಿ. ಅಂತಹ ವ್ಯಕ್ತಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲು ಬಿಡುವುದಿಲ್ಲ ಎಂದರು.

ಮುಸ್ಲಿಂ ಸಮುದಾಯದಲ್ಲಿ ಮೂರ್ತಿ ಪೂಜೆ ಇಲ್ಲ. ಟಿಪ್ಪು ಸುಲ್ತಾನ್‌ ಮೂರ್ತಿ ನಿರ್ಮಿಸುತ್ತೇವೆ ಎಂದರೆ ಮೂರ್ತಿ ಪೂಜೆಯನ್ನು ಒಪ್ಪಿಕೊಂಡಂತೆ. ಇಸ್ಲಾಂನಲ್ಲಿ ಮೂರ್ತಿ ಪೂಜೆ ಇಲ್ಲ ಅಂತಾದರೆ ತನ್ವೀರ್‌ ಸೇಠ್ ವಿರುದ್ಧ ಫತ್ವಾ ಹೊರಡಿಸಬೇಕು. ಬಹಿಷ್ಕಾರ ಹಾಕಬೇಕು ಎಂದು ಆಗ್ರಹಿಸಿದರು.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next