Advertisement

ಟಿಪ್ಪು ಪಾಠ ರದ್ದು: ವರದಿ ಬಳಿಕ ತೀರ್ಮಾನ

09:37 AM Nov 01, 2019 | Team Udayavani |

ಬೆಂಗಳೂರು: ಟಿಪ್ಪು ಸುಲ್ತಾನ್‌ಗೆ ಸಂಬಂಧಿಸಿದ ಪಾಠ ತೆಗೆದುಹಾಕುವ ಬಗ್ಗೆ ಪಠ್ಯಪುಸ್ತಕ ಸಮಿತಿ ವರದಿ ಸಲ್ಲಿಸಿದ ಅನಂತರ ಸರಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ತಿಳಿಸಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಿತಿಯು ವರದಿ ನೀಡಲಿದೆ. ನಿರ್ಣಯ ಮಾತ್ರ ಸರಕಾರದ್ದಾಗಿರಲಿದೆ. ಈ ನಿಟ್ಟಿನಲ್ಲಿ ಸರಕಾರ ದೃಢ ನಿರ್ಧಾರ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.

ಸಮಿತಿಯಲ್ಲಿ ಇಂಥವರನ್ನೇ ಹಾಕಿಕೊಳ್ಳುವಂತೆ ಒತ್ತಡ ಹೇರಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಕೊಡಗು ಜನರನ್ನು ಪ್ರತಿನಿಧಿಸುವ ಶಾಸಕ ಅಪ್ಪಚ್ಚು ರಂಜನ್‌ ಅವರನ್ನು ಸಭೆಗೆ ಕರೆದು, ಕೂಲಂಕಷವಾಗಿ ಚರ್ಚಿಸುವಂತೆ ಹೇಳಿದ್ದೇವೆ. ಎಲ್ಲ ನಿಟ್ಟಿನಿಂದಲೂ ಸಮಾಲೋಚನೆ ನಡೆಸಿದ ಅನಂತರ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಮುಖ್ಯಮಂತ್ರಿಗಳು ಕೂಡ ಪರಿಶೀಲಿಸುವುದಾಗಿಯೇ ಹೇಳಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next