Advertisement

ಭಾರತೀಯ ದೃಷ್ಟಿಕೋನದಿಂದ ಇತಿಹಾಸ ಬರೆಯುವ ಸಮಯ ಬಂದಿದೆ: ಅಮಿತ್ ಶಾ

09:35 AM Jan 12, 2023 | Team Udayavani |

ಹೊಸದಿಲ್ಲಿ: ಬ್ರಿಟಿಷರು ಭಾರತವನ್ನು ತೊರೆದಿದ್ದಾರೆ, ಇದೀಗ ಭಾರತೀಯ ದೃಷ್ಟಿಕೋನದಿಂದ ಇತಿಹಾಸವನ್ನು ಬರೆಯುವ ಸಮಯ ಬಂದಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

Advertisement

“ಪ್ರಧಾನಿ ನರೇಂದ್ರ ಮೋದಿಯವರ ವಸಾಹತುಶಾಹಿ ಕಾಲದ ಯಾವುದೇ ಅವಶೇಷಗಳನ್ನು ತೊಡೆದು ಹಾಕುವ ಉದ್ದೇಶಕ್ಕೆ ಅನುಗುಣವಾಗಿ, ಇತಿಹಾಸವನ್ನು ಅದರಿಂದ ಮುಕ್ತಗೊಳಿಸುವುದು ಅತ್ಯಂತ ಮುಖ್ಯ. ವೀರ ಸಾವರ್ಕರ್ ಅವರು 1857 ರ ದಂಗೆಯನ್ನು ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂದು ಕರೆಯುವ ಮೂಲಕ ಮೊದಲ ಬಾರಿಗೆ ಪ್ರಯತ್ನಿಸಿದರು” ಎಂದು ಶಾ ದೆಹಲಿಯಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಹೇಳಿದರು.

‘ಅಹಿಂಸಾತ್ಮಕ ಹೋರಾಟ’ ಭಾರತದ ಸ್ವಾತಂತ್ರ್ಯಕ್ಕೆ ದೊಡ್ಡ ಕೊಡುಗೆಯನ್ನು ಹೊಂದಿದೆ. ಆದರೆ ಇತರರ ಪಾತ್ರವಿಲ್ಲ ಎಂಬ ನಿರೂಪಣೆ ಸರಿಯಲ್ಲ ಎಂದು ಶಾ ಹೇಳಿದರು.

ಇದನ್ನೂ ಓದಿ:ನಾಳೆಯಿಂದ 15ನೇ ಹಾಕಿ ವಿಶ್ವಕಪ್‌;  ಡಿ ಗುಂಪಿನಲ್ಲಿ ಹರ್ಮನ್‌ಪ್ರೀತ್‌ ನಾಯಕತ್ವದ ಭಾರತ

“ಸಶಸ್ತ್ರ ಕ್ರಾಂತಿಯು ಸಮಾನಾಂತರವಾಗಿ ಪ್ರಾರಂಭವಾಗದಿದ್ದರೆ ಇನ್ನೂ ಹಲವಾರು ದಶಕಗಳ ಕಾಲ ಸ್ವಾತಂತ್ರ್ಯ ಸಿಗುತ್ತಿರಲಿಲ್ಲ” ಎಂದು ಶಾ ಹೇಳಿದರು. “ನಮಗೆ ಸ್ವಾತಂತ್ರ್ಯ ಸಿಕ್ಕಿದ್ದು ಅನುದಾನವಲ್ಲ, ಲಕ್ಷಾಂತರ ಜನರ ತ್ಯಾಗ ಮತ್ತು ರಕ್ತಪಾತದ ನಂತರ ಅದನ್ನು ಸಾಧಿಸಲಾಗಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಕರ್ತ್ಯವ್ಯ ಪಥದಲ್ಲಿ ಸ್ಥಾಪಿಸಲಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ನೋಡಿದಾಗ ತುಂಬಾ ತೃಪ್ತಿಯಾಗುತ್ತದೆ” ಅವರು ಹೇಳಿದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next