Advertisement

ಟಿಪ್ಪು ಜಯಂತಿಗೆ ಗಣ್ಯರಿಂದ ನಮನ

09:17 PM Nov 10, 2022 | Team Udayavani |

ಬೆಂಗಳೂರು: ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಟಿಪ್ಪು ಸುಲ್ತಾನ್‌ಗೆ ಟಿಪ್ಪು ಜಯಂತಿ ಅಂಗವಾಗಿ ಹಲವಾರು ರಾಜಕೀಯ ನಾಯಕರು ಟ್ವೀಟ್‌ ಮೂಲಕ ನಮನ ಸಲ್ಲಿಸಿದ್ದಾರೆ.

Advertisement

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು,  “ದೇಶ ಪ್ರೇಮಿ ಮತ್ತು ಮಾದರಿ ಆಡಳಿತಕ್ಕೆ ಹೆಸರು ವಾಸಿಯಾಗಿರುವ ಟಿಪ್ಪು ಸುಲ್ತಾನ್‌ ಅವರನ್ನು ಎಲ್ಲರೂ ಸ್ಮರಿಸೋಣ. ನನ್ನ ಗೌರವ ಪೂರಕ ನಮನಗಳನ್ನು ಅರ್ಪಿಸುತ್ತೇನೆ’ ಎಂದು ಹೇಳಿದ್ದಾರೆ.

“ಅಪ್ರತಿಮ ದೇಶಪ್ರೇಮಿ, ವೀರ ಸ್ವಾತಂತ್ರ್ಯ ಹೋರಾಟಗಾರ, ದಕ್ಷ ಆಡಳಿತಗಾರ ಮತ್ತು ಪರಧರ್ಮ ಸಹಿಷ್ಣು ಟಿಪ್ಪು ಸುಲ್ತಾನ್‌ ಓರ್ವ ಆದರ್ಶ ಸ್ವರೂಪಿ ಜನನಾಯಕ. ಬ್ರಿಟಿಷ್‌ ಸಾಮ್ರಾಜ್ಯವನ್ನು ಸಿಂಹ ಸ್ವಪ್ನದಂತೆ ಕಾಡಿದ ಟಿಪ್ಪು ತ್ಯಾಗ, ಪರಾಕ್ರಮವನ್ನು ಹೆಮ್ಮೆಯಿಂದ ಸ್ಮರಿಸುತ್ತೇವೆ. ಟಿಪ್ಪು ಜಯಂತಿ ದಿನ ಅವರಿಗೆ ಗೌರವದ ನಮನಗಳು’ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಟ್ವೀಟ್‌ ಮಾಡಿದ್ದಾರೆ.

“ಬ್ರಿಟಿಷರ ದಾಸ್ಯದಿಂದ ಭಾರತವನ್ನು ಸ್ವತಂತ್ರಗೊಳಿಸಲು ತನ್ನ ಮಕ್ಕಳನ್ನು ಒತ್ತೆಯಿಡಲು ಹಿಂಜರಿಯದ ಮಹಾನ್‌ ರಾಜ, ಸರ್ವಧರ್ಮಗಳನ್ನು ಸಮಾನವಾಗಿ ಕಂಡ ಮೈಸೂರು ಹುಲಿ ಟಿಪ್ಪು ಸುಲ್ತಾನ್‌ ಅವರ ಜಯಂತಿಯ ಶುಭಾಶಯಗಳು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next