Advertisement

“ವಿಜಯೇಂದ್ರಗೆ ಟಿಕೆಟ್‌ ಬೀದಿಯಲ್ಲಿ ತೀರ್ಮಾನ ಆಗಲ್ಲ’: ಸಿ.ಟಿ. ರವಿ 

12:27 AM Jul 27, 2022 | Team Udayavani |

ಚಿಕ್ಕಮಗಳೂರು: ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರಗೆ ಟಿಕೆಟ್‌ ಕೊಡುವುದು, ಬಿಡುವುದು ಬೀದಿಯಲ್ಲಿ ತೀರ್ಮಾನ ಆಗದು. ಪಾರ್ಲಿಮೆಂಟರಿ ಬೋರ್ಡ್‌ನಲ್ಲಿ ತೀರ್ಮಾನವಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಮುಕ್ತ ಅವಕಾಶ ಇರಬೇಕು. ವಂಶ ರಾಜಕಾರಣ ರಾಜಪ್ರಭುತ್ವದ ಲಕ್ಷಣ. ಜಾತಿ, ಧರ್ಮ, ಕುಟುಂಬ ರಾಜಕಾರಣ ಪ್ರಜಾಪ್ರಭುತ್ವ ವನ್ನು ಆವರಿಸಿಕೊಳ್ಳುವುದು ವಿಕೃತಿ. ಜನರ ವಿಶ್ವಾಸದ ಮೇಲೆ ಆಯ್ಕೆಯಾಗುವುದು ಪ್ರಜಾಪ್ರಭುತ್ವದ ಲಕ್ಷಣ ಎಂದರು.

ನಾನು ಯಾರಿಗೂ ಬಕೆಟ್‌ ಹಿಡಿದು ರಾಜಕಾರಣಿ ಆದವನಲ್ಲ. ನಾನು ಕುಮಾರಣ್ಣ, ದೇವೇಗೌಡರು, ಸಿದ್ದರಾಮಯ್ಯ ಗೆ ಬಕೆಟ್‌ ಹಿಡಿದಿಲ್ಲ. ಇದನ್ನು ಜಮೀರ್‌ ಅಹಮ್ಮದ್‌ ನೆನಪಿಟ್ಟುಕೊಳ್ಳಲಿ ಎಂದು ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next