Advertisement

ವಿಜಯಪುರ: ಸಿಡಿಲು ಬಡಿದು ಯುವಕ ಸಾವು

08:57 AM Apr 15, 2022 | keerthan |

ವಿಜಯಪುರ: ಸಿಡಿಲು ಬಡಿದು ಜಿಲ್ಲೆಯಲ್ಲಿ ಗುರುವಾರ ಯುವಕನೋರ್ವ ಸಾವಿಗೀಡಾದ ಘಟನೆ ತಿಕೋಟಾ ತಾಲೂಕಿನಲ್ಲಿ ನಡೆದಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಒಂದೇ ದಿನ ಇಬ್ಬರು ಸಿಡಿಲಿಗೆ ಬಲಿಯಾಗಿದ್ದಾರೆ.

Advertisement

ಸೋಮದೇವರಹಟ್ಟಿ ಹಟ್ಟಿ ಎಲ್.ಟಿ.ನಂ 2 ರಲ್ಲಿ ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿದೆ.

ಮೃತನನ್ನು ಯುವರಾಜ ಡಾಕು ರಾಠೋಡ (22 ವ) ಎಂದು ಗುರುತಿಸಲಾಗಿದೆ. ತೋಟದ ಮನೆಯಲ್ಲಿ ವಾಸವಾಗಿದ್ದ ಯುವರಾಜ ರಾತ್ರಿಯಲ್ಲಿ ವೇಳೆಯಲ್ಲಿ ಬಿರುಸಾಗಿ ಬೀರುಗಾಳಿ ಸಹಿತ ಮಳೆ ಬರುತ್ತಿತ್ತು. ಈ ವೇಳೆ ಮೂತ್ರ ಮಾಡಲು ಮನೆಯಿಂದ ಹೊರಗೆ ಹೋದಾಗ ಈ ಘಟನೆ ಸಂಭವಿಸಿ ಸಿಡಿಲು ಬಡಿದು ದುರಂತ ಸಂಭವಿಸಿದೆ.

ಇದನ್ನೂ ಓದಿ:ರಾಜೀನಾಮೆ ನೀಡುವಂತೆ ಈಶ್ವರಪ್ಪ ಮೇಲೆ ಹೈಕಮಾಂಡ್ ಒತ್ತಡ ಹೇರಿಲ್ಲ: ಸಿಎಂ ಬೊಮ್ಮಾಯಿ

ಸುದ್ದಿ ತಿಳಿದು ತಿಕೋಟಾ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next