Advertisement

Manipur ; ಮುಂದುವರಿದ ಹಿಂಸಾಚಾರ; ಮೂವರು ಯುವಕರ ಬರ್ಬರ ಹತ್ಯೆ

04:11 PM Aug 18, 2023 | Team Udayavani |

ಇಂಫಾಲ್: ಮಣಿಪುರದ ಜನಾಂಗೀಯ ಸಂಘರ್ಷ ಮುಂದುವರಿದಿದ್ದು, ಉಖ್ರುಲ್ ಜಿಲ್ಲೆಯ ದೂರದ ಕುಕಿ ಥೋವೈ ಗ್ರಾಮದಲ್ಲಿ ಭಾರೀ ಗುಂಡಿನ ಚಕಮಕಿ ನಡೆದಿದ್ದು, ಮೂವರು ಯುವಕರನ್ನು ಹತ್ಯೆಗೈಯಲಾಗಿದೆ.

Advertisement

ಯುವಕರು 24 ರಿಂದ 35 ವರ್ಷ ವಯಸ್ಸಿನವರಾಗಿದ್ದು, ಘಟನೆ ಬಳಿಕ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ತೀವ್ರ ಶೋಧ ನಡೆಸಿದ ಬಳಿಕ ಮೃತದೇಹಗಳು ಪತ್ತೆಯಾಗಿವೆ.ಹರಿತವಾದ ಚಾಕುಗಳನ್ನು ಬಳಸಿ ಕೈಕಾಲುಗಳನ್ನು ಸಹ ಕತ್ತರಿಸಲಾಗಿದೆ.

ಮೇ 3 ರಂದು ಈಶಾನ್ಯ ರಾಜ್ಯದಲ್ಲಿ ಹುಟ್ಟಿಕೊಂಡ ಜನಾಂಗೀಯ ಹಿಂಸಾಚಾರ ನಿಲ್ಲಿಸುವುದು ಮಣಿಪುರ ಮತ್ತು ಕೇಂದ್ರ ಸರಕಾರಕ್ಕೆ ದಿನದಿಂದ ದಿನಕ್ಕೆ ಜಟಿಲವಾಗಿ ಪರಿಣಮಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next