Advertisement

ಡೋಣಿ ನದಿ ಪ್ರವಾಹದಲ್ಲಿ ಸಿಲುಕಿರುವ ಮೂವರು ಕುರಿಗಾಯಿಗಳು

09:58 AM Nov 05, 2019 | sudhir |

ವಿಜಯಪುರ: ಜಿಲ್ಲೆಯ ತಾಳಿಕೋಟೆ ತಾಲೂಕಿನ ಮಿಣಜಗಿ ಗ್ರಾಮದ ಬಳಿ ಡೋಣಿ ನದಿಯ ಪ್ರವಾಹದ ಕಾರಣ ಮೂವರು ಕುರಿಗಾಯಿಗಳು ಹಾಗೂ 300 ಕುರಿಗಳು ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದಾರೆ.

Advertisement

ಸೋಮವಾರ ರಾತ್ರಿ ಪ್ರವಾಹ ಉಕ್ಕೇರಿದ್ದು, ಕುರಿಗಾಯಿಗಳು ಅಪಾಯಕ್ಕೆ ಸಿಲುಕಿರುವ ಸುದ್ದಿ ತಿಳಿದ ತಾಳಿಕೋಟೆ ತಹಶೀಲ್ದಾರ್ ಅನಿಲಕುಮಾರ ಢವಳಗಿ, ತಾಳಿಕೋಟೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದಾರೆ. ಆದರೆ ಪ್ರವಾಹ ಗಂಭೀರ ಸ್ವರೂಪದಲ್ಲಿ ಇದ್ದು, ಬೋಟ್ ಮುಖಾಂತರ ಕುರಿಗಾಹಿಗಳ ರಕ್ಷಣೆಗೆ ಚಿಂತನೆ ನಡೆದಿದೆ.

ಜಿಲ್ಲೆಯ ಡೋಣಿ ನದಿ ಪಾತ್ರದಲ್ಲಿ ನಿನ್ನೆ ಅಧಿಕ ಪ್ರಮಾಣದಲ್ಲಿ ಮಳೆ ಆಗಿದ್ದು, ನದಿಯಲ್ಲಿ ಉಂಟಾದ ಪ್ರವಾಹದಿಂದ ಕುರಿಗಾಯಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next