Advertisement

ಹೊಳಲ್ಕೆರೆ: ಬಸ್‌ –ಬೈಕ್‌ ನಡುವೆ ಭೀಕರ ಅಪಘಾತ; ಮೂವರು ಸ್ಥಳದಲ್ಲೇ ಸಾವು

08:12 PM Oct 03, 2022 | Team Udayavani |

ಹೊಳಲ್ಕೆರೆ (ಚಿತ್ರದುರ್ಗ): ಬಸ್‌ – ಬೈಕ್‌ ನಡುವಿನ ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಘಟನೆ ಹೊಳಲ್ಕೆರೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲಿರುವ ಕುಕ್ವಾಡೇಶ್ವರಿ ದೇವಸ್ಥಾನದ ಸಮೀಪ ಸೋಮವಾರ (ಅ.3) ರಂದು ನಡೆದಿದೆ.

Advertisement

ಹೊಳಲ್ಕೆರೆ ತಾಲೂಕಿನ ಮಾಳೇನಹಳ್ಳಿ ಸತೀಶ್ (23), ಮನು (22) ಹೊಳಲ್ಕೆರೆ ತಾಲೂಕಿನ ರಂಗಾಪುರ ಗ್ರಾಮದ ಗ್ರಾಮ ಸಹಾಯಕನಾದ ಚಂದ್ರಶೇಖರ್ (25) ಮೃತ ದುರ್ದೈವಿಗಳು.

ಶಿವಮೊಗ್ಗದಿಂದ ಹೊಳಲ್ಕೆರೆಗೆ ಬರುತ್ತಿದ್ದ ಸರಕಾರಿ ಬಸ್ ಮುಂದೆ ಬರುತ್ತಿದ್ದ ಎರಡು ಬೈಕ್ ಗಳಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್  ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಈ ಸಂಬಂಧ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next