Advertisement

ಕುಂದಗೋಳ : ಮನೆ ಕುಸಿದು ಮಕ್ಕಳಿಬ್ಬರು ಸೇರಿ ಮೂರು ಸಾವು

09:48 AM May 15, 2019 | Vishnu Das |

ಹುಬ್ಬಳ್ಳಿ: ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ಸೋಮವಾರ ರಾತ್ರಿ ಮನೆಯೊಂದು ಕುಸಿದ ಪರಿಣಾಮ ಮಕ್ಕಳಿಬ್ಬರು ಮತ್ತು ಮಹಿಳೆಯೊಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಮೃತರು ಯಲ್ಲವ್ವ ಗಾಡದ (56) ಮೊಮ್ಮಕ್ಕಳಾದ ಜ್ಯೋತಿ ಮೇಟಿ(9) ಮತ್ತು ಶ್ರಾವಣಿ ರಾದಾಯಿ (4) ಎಂದು ಗುರುತಿಸಲಾಗಿದೆ.

ಕುಂದಗೋಳ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸ್ಥಳಕ್ಕೆ ಕುಂದಗೋಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ಶಿವಳ್ಳಿ ಅವರು ಆಗಮಿಸಿದರು. ಈ ವೇಳೆ ಅವರು ಮಕ್ಕಳ ಶವಗಳ ಮಂದೆ ಕಣ್ಣೀರಿಟ್ಟರು.

ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮನೆಗೆ ಆಗಮಿಸಿ ಮೃತರ ಕುಟುಂಫ‌ ಸದಸ್ಯರಿಗೆ ಸಾಂತ್ವಾನ ಹೇಳಲಿದ್ದಾರೆ ಎಂದು ವರದಿಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next