Advertisement

ಬೆಳ್ಮಣ್: ಸ್ಕಿಡ್‌ ಆಗಿ ಪಲ್ಟಿಯಾದ ಜೀಪ್‌; ಬಾಲಕಿ ಸಾವು, ಮೂವರು ಗಂಭೀರ

07:30 PM Jun 19, 2022 | Team Udayavani |

ಬೆಳ್ಮಣ್: ಜೀಪೊಂದು ಸ್ಕಿಡ್‌ ಆಗಿ ಪಲ್ಟಿಯಾದ ಪರಿಣಾಮ ಬಾಲಕಿಯೊಬ್ಬಳು ಸಾವನ್ನಪ್ಪಿದ್ದು, ಮೂವರು ಗಂಭೀರ ಗಾಯಗೊಂಡಿರುವ ಘಟನೆ ಮುಂಡ್ಕೂರು ಸಂಕಲಕರಿಯದಲ್ಲಿ ರವಿವಾರ ಸಂಜೆ ( ಜೂ 19 ರಂದು) ನಡೆದಿದೆ.

Advertisement

ಮುಂಡ್ಕೂರು ನಾನಿಲ್ತಾರ್ ನ ಜಯರಾಮ ಎಂಬವರಿಗೆ ಸೇರಿದ ಜೀಪ್‌ ನ್ನು ಭಾಸ್ಕರ ಎಂಬವರು ಚಲಾಯಿಸುತ್ತಿದ್ದರು. ಈ ವೇಳೆ ಜೀಪ್‌ ಸ್ಕಿಡ್‌ ಆಗಿ ಪಲ್ಟಿಯಾಗಿದೆ. ಪರಿಣಾಮ  ಜೀಪ್‌ ನಲ್ಲಿ ಚಾಲಕ ಸೇರಿ ಐದು ಜನರಿದ್ದರು ಎನ್ನಲಾಗಿದೆ. ಈ ಪೈಕಿ ಬಾಲಕಿಯೊಬ್ಬಳು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಇನ್ನು ಮೂವರಿಗೆ ಗಂಭೀರ ಗಾಯಾಗಳಾಗಿವೆ. ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅತ್ರಾಡಿ-ಬಜಪೆ ರಸ್ತೆ ಕಾಮಗಾರಿ ನಡೆಯುತ್ತಿದೆ. ಬೆಳ್ಮಣ್ -ಸಂಕಲಕರಿಯ ರಸ್ತೆ ಕಾಮಗಾರಿ ಶೀಘ್ರಗತಿಯಲ್ಲಿ ನಡೆಯುತ್ತಿದ್ದು ,ರಸ್ತೆಯ ತಿರುವಿನ ಬಗ್ಗೆ ತಿಳಿಯದೆ ಅಪಘಾತ ನಡೆದಿದೆ ಎನ್ನಲಾಗಿದೆ.

ಕಾರ್ಕಳ ಗ್ರಾಮಾಂತರ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next