Advertisement

ಕಾನ್ಪುರ : ನದಿಗೆ ಬೈಕ್‌ ಉರುಳಿ ಬಿದ್ದು ಮೂವರ ದಾರುಣ ಸಾವು

07:20 PM Nov 05, 2018 | udayavani editorial |

ಕಾನ್ಪುರ : ಚೌಬೇಪುರದಲ್ಲಿ ನದಿಯೊಂದರ ಸೇತುವೆಯ ತುಂಡಾದ ಬೇಲಿಗೆ ಢಿಕ್ಕಿ ಹೊಡೆದ ಬೈಕ್‌ 30 ಅಡಿ ಆಳ ನದಿಗೆ ಉರುಳಿ ಬಿದ್ದ  ಅವಘಡದಲ್ಲಿ ಮೂವರು ಮೃತಪಟ್ಟ ಘಟನೆ ಇಂದು ಸೋಮವಾರ ನಡೆದಿದೆ. 

Advertisement

ಮೃತರನ್ನು ಬೈಕ್‌ ಚಲಾಯಿಸುತ್ತಿದ್ದ ಬಾಬು ಲಾಲ್‌ ಕುರಿಲ್‌ (28), ಆತನ ಸೋದರ ಸಂಬಂಧಿ ಪ್ರವೀಣ್‌ (30) ಮತ್ತು ಸೋನು (26) ಎಂದು ಗುರುತಿಸಲಾಗಿದೆ. 

ಬೈಕಿನಲ್ಲಿದ್ದವರು ಶಿವರಾಜಪುರದಿಂದ ಕಾನ್ಪುರಕ್ಕೆ ಹೋಗುತ್ತಿದ್ದರು ಎಂದು ಚೌಬೇಕಪುರ ಪೊಲೀಸ್‌ ಠಾಣಾಧಿಕಾರಿ ದೇವೇಂದ್ರ ಸಿಂಗ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next