Advertisement

ಕಣಿವೆಯಲ್ಲಿ ಉಗ್ರರ ಅಟ್ಟಹಾಸ : ಕಾಶ್ಮೀರದಲ್ಲಿ ಮೂವರನ್ನು ಕೊಂದ ಪಾಪಿಗಳು  

08:37 AM Oct 06, 2021 | Team Udayavani |

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಉಗ್ರರು ಹೇಯ ಕೃತ್ಯ ಮೆರೆದಿದ್ದಾರೆ. ಉಗ್ರರ ಕೆಂಗಣ್ಣಿಗೆ ಮೂವರು ನಾಗರಿಕರನ್ನು ಹತ್ಯೆಯಾಗಿದ್ದಾರೆ.

Advertisement

ಉಗ್ರರು ನಡೆಸಿದ ಗುಂಡಿನ ದಾಳಿಗೆ ಮಖನ್​ ಔಷಧಾಲಯದಲ್ಲಿದ್ದ ಒಬ್ಬರನ್ನು ಸೇರಿ ಇಬ್ಬರು ಬೀದಿ ಬದಿ ವ್ಯಾಪಾರಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಉಗ್ರರು ಶ್ರೀನಗರದ ಹವಾಲ್ ಮದಿನ್​ ಸಾಹಿಬ್​​ ಬಳಿ ಗುಂಡಿನ ದಾಳಿ ನಡೆಸಿದ್ದಾರೆ.  ಇದೇ ಹಿನ್ನೆಲೆಯಲ್ಲಿ ರಕ್ಷಣಾಪಡೆಗಳು ದಾಳಿಕೋರರಿಗಗಿ ಕಾರ್ಯಾಚರಣೆ ನಡೆಸುತ್ತಿವೆ.

ಶ್ರೀನಗರದಲ್ಲಿ ಕಾಶ್ಮೀರಿ ಪಂಡಿತ ಮಖನ್ ಲಾಲ್ ಬಿಂದ್ರೋ ಎಂಬುವವರ ಮೇಲೆ ಗುಂಡಿನ ದಾಳಿ  ಮಾಡಿ ಕೊಲ್ಲಲಾಗಿದೆ. ನಂತರ ಮದಿನಾ ಚೌಕ್​ ಲಾಲ್ ​ಬಜಾರ್​ನ ವೆಂದೂರ್​ ​ನಲ್ಲಿನ ನಾಗರಿಕ ವಿರೇಂದ್ರ ಪಾಸ್ವಾನ್ ಎಂಬುವವರನ್ನೂ ಕೊಲೆಗೈಯ್ಯಲಾಗಿದೆ ಎಂದು ಹೇಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next