Advertisement

ಇಲ್ಲಿ ಆಯ್ತು, ಅಂತಾರಾಷ್ಟ್ರೀಯ ನ್ಯಾಯಾಲಯದ ಕದ ತಟ್ಟಿದ ನಿರ್ಭಯಾ ಹಂತಕರು!

10:13 AM Mar 17, 2020 | Hari Prasad |

ನವದೆಹಲಿ: ನಿರ್ಭಯಾ ಅತ್ಯಾಚಾರ ಮತ್ತು ಬರ್ಭರ ಹತ್ಯೆ ಪ್ರಕರಣದಲ್ಲಿ ಅಪರಾಧಿಗಳೆಂದು ವಿಚಾರಣಾ ನ್ಯಾಯಾಲಯದಿಂದ ಘೋಷಿಸಲ್ಪಟ್ಟು ಮರಣ ದಂಡನೆ ಶಿಕ್ಷೆಗೆ ಗುರಿಯಾಗಿದ್ದ ನಾಲ್ವರು ನಿರ್ಭಯಾ ಹಂತಕರಲ್ಲಿ ಮೂವರು ಇದೀಗ ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಿದ್ದಾರೆ.

Advertisement

ನಾಲ್ವರು ಅಪರಾಧಿಗಳಲ್ಲಿ ಅಕ್ಷಯ್, ಪವನ್ ಮತ್ತು ವಿನಯ್ ತಮಗೆ ವಿಧಿಸಲಾಗಿರುವ ಗಲ್ಲು ಶಿಕ್ಷೆಗೆ ತಡೆ ನೀಡಬೇಕೆಂದು ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.


ಈ ಪ್ರಕರಣದಲ್ಲಿ ತನ್ನ ವಕೀಲರಾಗಿದ್ದ ವೃಂದ ಗ್ರೋವರ್ ಅವರು ವಿಚಾರಣೆಯ ಸಂದರ್ಭದಲ್ಲಿ ತನ್ನ ದಾರಿ ತಪ್ಪಿಸಿದ್ದು ಹಾಗಾಗಿ ತನಗೆ ನ್ಯಾಯಾಂಗ ಹೋರಾಟದ ಎಲ್ಲಾ ಅವಕಾಶಗಳನ್ನೂ ಮರಳಿ ಕೊಡಬೇಕೆಂದು ಮುಕೇಶ್ ಸಿಂಗ್ ಸುಪ್ರೀಂ ಕೋರ್ಟಿಗೆ ಸಲ್ಲಿಸಿದ್ದ ಅರ್ಜಿಯನ್ನು ಇಂದು ವಜಾಗೊಳಿಸಿತ್ತು.

ಮಕೇಶ್ ಸಲ್ಲಿಸಿದ್ದ ಈ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿ ಮಾರ್ಚ್ 20ಕ್ಕೆ ಗಲ್ಲು ಶಿಕ್ಷೆಯನ್ನು ಜಾರಿಗೊಳಿಸಲು ಇದ್ದ ಅಡ್ಡಿಗಳೆಲ್ಲವನ್ನೂ ತೆರವುಗೊಳಿಸಿದ ಬೆನ್ನಲ್ಲೇ ಇನ್ನುಳಿದ ಮೂವರು ಅಪರಾಧಿಗಳು ಇದೀಗ ಅಂತಾರಾಷ್ಟ್ರೀಯ ನ್ಯಾಯಾಲಯದ ಕದ ತಟ್ಟಿರುವುದು ಈ ಪ್ರಕರಣದ ಕುತೂಹಲವನ್ನು ಹೆಚ್ಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next