Advertisement

ಸಾಗರ: ಮೂರು ಕಣ್ಣಿನ ಅಡಿಕೆ ಪತ್ತೆ

12:25 PM Jan 15, 2022 | Suhan S |

ಸಾಗರ: ಹಸಿ ಅಡಿಕೆಯನ್ನು ಸುಲಿದಾಗ ಒಂದು ಕಣ್ಣು ಕಾಣಿಸುವುದು ಪ್ರಕೃತಿ ನಿಯಮ. ಉರುಟಾದ ಅಡಿಕೆಯ ಚಪ್ಪಟೆಯ ಭಾಗದಲ್ಲಿ ಬಿಳಿ ಮೃದು ಭಾಗದಲ್ಲಿ ಬುಗುರಿಯ ರೂಪದ ಬಿಳಿ ಕಣ್ಣಿರುತ್ತದೆ. ಪ್ರಕೃತಿಯ ವೈಚಿತ್ರದ ಆಟದಲ್ಲಿ ಇಂತಹ ಅಡಿಕೆ ಬೆಳೆಯಲ್ಲಿ ಕೆಲವೊಮ್ಮೆ ಎರಡು ಸಯಾಮಿಗಳು ಸೃಷ್ಟಿಯಾಗಿ ಎರಡು ಕಣ್ಣುಗಳಿರುವುದನ್ನೂ ಕಾಣುತ್ತೇವೆ. ಅದಕ್ಕೆ ಬೆನವ ಅಥವಾ ಬೆನಮ ಎನ್ನುತ್ತಾರೆ.

Advertisement

ಹಿಂದೆಲ್ಲ ಅಡಿಕೆ ಸುಲಿಯುವವರಿಗೆ ಬೆನವ ಬಂದರೆ ಅದನ್ನು ಅಡಿಕೆ ಸುಲಿಯುತ್ತಿರುವ ಇತರರಿಗೆ ತೋರಿಸಿದರೆ ಅವರು ಆಗ ತಮ್ಮ ಕೈಯಲ್ಲಿ ಇರುವ ಅಷ್ಟೂ ಸುಲಿದ ಅಡಿಕೆಯನ್ನು ಕೊಡಬೇಕಿತ್ತು. ಈ ಕೆಲಸವನ್ನು ಅಲ್ಲೇ ಆಟವಾಡುವ ಮಕ್ಕಳ ಕೈಯಲ್ಲಿ ಮಾಡಿಸುತ್ತಿದ್ದರು.

ಪ್ರಕೃತಿ ತೀರಾ ವೈಚಿತ್ರ್ಯ ಪ್ರದರ್ಶಿಸಿದಾಗ ಮೂರು ಕಣ್ಣಿನ ಅಡಿಕೆ ಕಂಡುಬರುತ್ತದೆ! ತಾಲೂಕಿನ ಎಡಜಿಗಳೇಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶೆಟ್ಟಿಸರದ ಎಸ್.ಪಿ.ಲಕ್ಷ್ಮೀನಾರಾಯಣಭಟ್ಟರ ಮನೆಯಲ್ಲಿ ಹಸಿ ಅಡಿಕೆ ಸುಲಿದಾಗ ಈ ಮೂರು ಕಣ್ಣಿನ ಬೆನವ ಕಾಣಿಸಿದೆ. ಸುಲಿಯುವಾಗಲೇ ಹೋಳಾಗಿಬಿಡುವ ಅಪಾಯವಿರುವ ಈ ಬೆನವ ಏನೂ ಘಾಸಿಯಾಗದೆ ಸುಲಿತವಾಗಿರುವುದು ಕೂಡ ಅಪರೂಪವೇ ಸರಿ.

Advertisement

Udayavani is now on Telegram. Click here to join our channel and stay updated with the latest news.

Next