Advertisement

Mangaluru ಪೊಲೀಸರಿಗೆ ಬೆದರಿಕೆ: ಆರೋಪಿಯ ಬಂಧನ

09:15 PM Aug 14, 2023 | Team Udayavani |

ಮಂಗಳೂರು: ಪೊಲೀಸರಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉರ್ವ ಪೊಲೀಸರು ಶಕ್ತಿನಗರದ ಪುನೀತ್‌ ಶೆಟ್ಟಿ (35)ಯನ್ನು ಬಂಧಿಸಿದ್ದಾರೆ.

Advertisement

ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಠಾಣೆಗೆ ಕರೆ ಮಾಡಿದ ಪುನೀತ್‌ ಪೊಲೀಸರೊಂದಿಗೆ ಮಾತನಾಡುತ್ತಾ ಬೆದರಿಕೆ ಹಾಕಿದ್ದಾನೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿ ವಿರುದ್ಧ ಬರ್ಕೆ, ಪಾಂಡೇಶ್ವರ, ಬಂದರು, ಉರ್ವ, ಕಂಕನಾಡಿ ನಗರ ಪೊಲೀಸ್‌ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.

 

Advertisement

Udayavani is now on Telegram. Click here to join our channel and stay updated with the latest news.

Next