Advertisement

ಜ್ಞಾನವಾಪಿ ಅರ್ಜಿದಾರರಿಗೆ ಬೆದರಿಕೆ

06:46 PM Aug 18, 2022 | Team Udayavani |

ವಾರಾಣಸಿ: ವಾರಾಣಸಿಯಲ್ಲಿ ಇರುವ ಜ್ಞಾನವಾಪಿ ಮಸೀದಿ ಪ್ರಕರಣದ ಅರ್ಜಿದಾರರಲ್ಲಿ ಒಬ್ಬರಾಗಿರುವ ಮಹಿಳೆಯ ಪತಿಗೆ ಕೇಸು ವಾಪಸ್‌ ಪಡೆಯಬೇಕು. ಇಲ್ಲದೇ ಇದ್ದರೆ ರಾಜಸ್ಥಾನದ ಟೈಲರ್‌ ಕನ್ಹಯ್ಯ ಲಾಲ್‌ನ ಸ್ಥಿತಿ ಬರಬಹುದು ಎಂಬ ಬೆದರಿಕೆ ಕರೆ ಬಂದಿದೆ.

Advertisement

ಪಾಕಿಸ್ತಾನದ ಪೋನ್‌ ನಂಬರ್‌ನಿಂದ ಈ ಕರೆ ಬಂದಿದೆ ಎಂದು ಸೋಹನ್‌ ಲಾಲ್‌ ಆರ್ಯ ಎಂಬವರು ಆರೋಪಿಸಿದ್ದಾರೆ. ಜು.19 ಮತ್ತು ಜು.20ರಂದು ಈ ಕರೆಗಳು ಬಂದಿದ್ದವು ಎಂದಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಕೇಸು ದಾಖಲಿಸಿಕೊಳ್ಳಲಾಗಿದೆ ಎಂದು ವಾರಾಣಸಿಯ ಲಾಕ್ಸಾ ಠಾಣೆಯ ಪೊಲೀಸರು ತಿಳಿಸಿದ್ದಾರೆ ಮತ್ತು ಅವರ ನಿವಾಸದ ಮುಂದೆ ಇಬ್ಬರು ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next