Advertisement

ಬಿಲ್ಲವರ ಪಾದಯಾತ್ರೆ ಹತ್ತಿಕ್ಕಲು ಸರಕಾರದ ಕಡೆಯಿಂದ ಬೆದರಿಕೆ: ಪ್ರಣಾವನಂದ ಸ್ವಾಮೀಜಿ

12:45 PM Jan 05, 2023 | Team Udayavani |

ಮಂಗಳೂರು: ಬಿಲ್ಲವರ ಪಾದಯಾತ್ರೆ ಹತ್ತಿಕ್ಕಲು ಸರಕಾರದ ಕಡೆಯಿಂದ ಸಾಕಷ್ಟು ಒತ್ತಡ, ಜೀವ ಬೆದರಿಕೆ ಇದೆ. ಆದರೆ ಅದಕ್ಕೆ ಜಗ್ಗದೆ ಪಾದಯಾತ್ರೆ ನಡೆಸಲಾಗುವುದು ಎಂದು ಕಲಬುರ್ಗಿ ಜಿಲ್ಲೆ ಚಿತ್ತಾಪುರ ತಾಲೂಕು ಕರದಾಳು ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಡಾ ಪ್ರಣಾವನಂದ ಸ್ವಾಮೀಜಿ ಹೇಳಿದರು.

Advertisement

ಗುರುವಾರ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪಾದಯಾತ್ರೆ ಯಾವುದೇ ಪಕ್ಷ, ಸರಕಾರದ ವಿರುದ್ಧವಲ್ಲ. ಸಮಾಜದ ನ್ಯಾಯಕ್ಕಾಗಿ. ಆದರೆ ಪಾದಯಾತ್ರೆ ತಡೆಯಲು ಆರೋಪ, ಷಡ್ಯಂತ್ರ ನಡೆಯುತ್ತಿದೆ. ಸರಕಾರದ ಭಾಗದಿಂದ ನನಗೆ ಜೀವಭಯವಿದೆ. ಆದರೆ ಬೆದರಿಕೆಗೆ ಜಗ್ಗುವುದಿಲ್ಲ ಎಂದು ಹೇಳಿದರು.

ಬೆಳಗ್ಗೆ 10.30ಕ್ಕೆ ಕುದ್ರೋಳಿ ದೇವಸ್ಥಾನದಲ್ಲಿ ಸಭೆ ನಡೆಯಲಿದೆ. ಅನಂತರ ಮಧ್ಯಾಹ್ನ 1 ಕ್ಕೆ ಕುದ್ರೋಳಿ ದೇವಸ್ಥಾನದಿಂದ ಪಾದಯಾತ್ರೆ ಆರಂಭಗೊಳ್ಳಲಿದೆ. 40 ದಿನಗಳಲ್ಲಿ ಬೆಂಗಳೂರಿಗೆ 658 ಕಿ.ಮೀ ಸಾಗಲಿದೆ.  ಬಿಲ್ಲವರ ನಿಗಮ ಘೋಷಣೆಯಾಗಬೇಕು, ಗರೋಡಿಗಳ ಭೂಮಿ ಗರೋಡಿ ಸಮಿತಿಯವರಿಗೆ ಸಿಗಬೇಕು ಮೊದಲಾದ 10 ಬೇಡಿಕೆಗಳ ಈಡೇರಿಸಲು ಒತ್ತಾಯಿಸಿ ಪಾದಯಾತ್ರೆ ನಡೆಸುತ್ತಿದ್ದೇವೆ. ರಾಜಕೀಯ ಪಕ್ಷ ಅಥವಾ ನಾಯಕರಿಂದ ದೇಣಿಗೆ ಪಡೆದಿಲ್ಲ. ಪಾದಯಾತ್ರೆಗೆ ಒಂದೂವರೆ ಕೋಟಿ ರೂ. ಖರ್ಚಾಗಲಿದ್ದು ಜಿಲ್ಲಾ ಸಮಿತಿಗಳು ಸಮುದಾಯದವರಿಂದ ದೇಣಿಗೆ ಸಂಗ್ರಹಿಸುತ್ತಿದ್ದಾರೆ ಎಂದು ಸ್ವಾಮೀಜಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next