Advertisement

ಲೋಕಸಭೆಗೆ ಸ್ಪರ್ಧಿಸುವ ಚಿಂತನೆ: ಕತ್ತಿ

10:14 PM Sep 28, 2021 | Team Udayavani |

ಸಂಕೇಶ್ವರ : ತಮ್ಮ ಎರಡು ಯೋಜನೆಗಳು ಪೂರ್ತಿಯಾದ ಬಳಿಕ ಮುಂಬರುವ ದಿನಗಳಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದಾಗಿ ಸಚಿವ ಉಮೇಶ ಕತ್ತಿ ಇಂದಿಲ್ಲಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

Advertisement

ಸೋಮವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಿಕ್ಕೋಡಿ ಮತ್ತು ಬೆಳಗಾವಿ ಈ ಎರಡು ಕ್ಷೇತ್ರದಲ್ಲಿ ಸಹೋದರ ರಮೇಶ ಕತ್ತಿ ಬಿಟ್ಟು ಕೊಡುವ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆಗೆ ಇಳಿಯುತ್ತೇನೆ ಎಂದು ಹೇಳಿದರು. ಹಾಗಾದರೆ ಹುಕ್ಕೇರಿ ಮತಕ್ಷೇತ್ರ ಯಾರಿಗೆ ಬಿಟ್ಟು ಕೊಡುತ್ತೀರಾ ಎಂಬ ಪ್ರಶ್ನೆಗೆ, ನಮ್ಮ ಕುಟುಂಬದಲ್ಲಿ ನಿಖೀಲ, ಪೃಥ್ವಿ, ಪವನ ಹೀಗೆ ಮೂವರು ತಯಾರಿದ್ದಾರೆ. ಅವರಲ್ಲಿ ಯಾರಾದರು ಒಬ್ಬರು ಸ್ಪರ್ಧೆ ಮಾಡಲು ಸನ್ನದ್ಧರಾಗಿದ್ದಾರೆ ಎಂದು ತಿಳಿಸಿದರು.

ಈಗಾಗಲೇ ಬೆಳಗಾವಿಯಲ್ಲಿ ಮಂಗಳಾ ಅಂಗಡಿ ಅವರು ಸಂಸದೆ ಆಗಿದ್ದಾರೆ. ಅದರಂತೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಜೊಲ್ಲೆ ಅವರು ಸಂಸದರಾಗಿದ್ದಾರೆ. ನಿಮಗೆ ಹೇಗೆ ಅವಕಾಶ ಸಿಗುತ್ತದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತ, ಸಂಸದರು ಏನಾದರು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ವಿಚಾರ ವ್ಯಕ್ತಪಡಿಸಿದರೆ ನೋಡೋಣ. ಇಲ್ಲವಾದಲ್ಲಿ ಬೇರೆ ಯಾವುದಾದರು ಜಿಲ್ಲೆಯಿಂದ ಆದರೂ ಸ್ಪರ್ಧೆಗೆ ಇಳಿಯುವುದಾಗಿ ಇಂಗಿತ ವ್ಯಕ್ತಪಡಿಸಿದರು.

ಅಲ್ಲದೆ ಮಾಜಿ ಸಚಿವ ಎ.ಬಿ.ಪಾಟೀಲರ ಬಗ್ಗೆ ಯಾವ ವೈಮನಸ್ಸು ತಮಗೆ ಇಲ್ಲ. ಕ್ಷೇತ್ರದ ಅಭಿವೃದ್ಧಿ ಬಗ್ಗೆ ಅವರ ಜೊತೆ ಕೂಡ ಮಾತನಾಡುತ್ತೇನೆ ಎಂದು ತಿಳಿಸಿದರು. ಅದರಂತೆ ಸಂಕೇಶ್ವರದ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಯನ್ನು ಖಾಸಗಿಯವರಿಗೆ ಲೀಜ್‌ ಕೊಡುವ ಬಗ್ಗೆ ಪ್ರಚಾರ ನಡೆಯುತ್ತಿರುವ ಕುರಿತು ಕೇಳಿದಾಗ ಸದ್ಯ ಆ ರೀತಿಯ ವಿಚಾರವಿಲ್ಲ. ಅನಿವಾರ್ಯವಾದರೆ ಮುಂದೆ ನೋಡೋಣ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next