Advertisement

ಜಿಎಸ್‌ಟಿ ಪರಿಹಾರ ಪ್ಯಾಕೇಜ್‌ಗೆ ಚಿಂತನೆ

02:02 AM Apr 28, 2020 | Team Udayavani |

ಹೊಸದಿಲ್ಲಿ: ಕೋವಿಡ್ 19 ಸೋಂಕಿನಿಂದ ವ್ಯವಹಾರಗಳ ಮೇಲೆ ಆಗಿರುವ ಪರಿಣಾಮ ತಗ್ಗಿಸಲು ಮತ್ತು ಆರ್ಥಿಕತೆಗೆ ಚೈತನ್ಯ ಒದಗಿಸುವ ದೃಷ್ಟಿಯಿಂದ ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ) ಪರಿಹಾರ ಪ್ಯಾಕೇಜ್‌ ಘೋಷಣೆಗೆ ಕೇಂದ್ರ ಸರಕಾರವು ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

Advertisement

ರಿಯಲ್‌ ಎಸ್ಟೇಟ್‌, ರೆಸ್ಟೋರೆಂಟ್‌ಗಳು, ವಿಮಾನಯಾನ ಮತ್ತು ಆತಿಥ್ಯ ವಲಯದ ಸಂಸ್ಥೆ, ಉದ್ಯಮಗಳಿಗೆ ಅನು ಕೂಲವಾಗುವಂತೆ 6 ತಿಂಗಳು ಜಿಎಸ್‌ಟಿ ಪಾವತಿಯಿಂದ ವಿನಾಯಿತಿ ನೀಡುವುದು, ಪ್ರಸ್ತುತ ಇರುವ ಇನ್‌ವಾಯ್ಸ ಆಧರಿಸಿ ತೆರಿಗೆ ವಿಧಿಸುವ ಬದಲು ನಗದು ಆಧರಿಸಿ ವಿಧಿಸುವ ಕ್ರಮ ಜಾರಿ ಮತ್ತು ಈಗಾಗಲೇ ಸರಕು ಮಾರಾಟ ಮಾಡಿದ್ದರೂ ಲಾಕ್‌ಡೌನ್‌ನಿಂದ ಹಣ ಪಾವತಿಯಾಗದೆ ಇದ್ದರೆ ಅದನ್ನು ವಸೂಲಿಯಾಗದ ಸಾಲ ಎಂದು ಪರಿಗಣಿಸಿ ಜಿಎಸ್‌ಟಿ ಪರಿಹಾರ ಒದಗಿಸು ವುದು ಈ ಪ್ಯಾಕೇಜ್‌ನಲ್ಲಿ ಸೇರಿವೆ.

ರಿಯಲ್‌ ಎಸ್ಟೇಟ್‌ ವಲಯಕ್ಕೆ ಜಿಎಸ್‌ಟಿ ದರ ಕಡಿತ ಪ್ರಸ್ತಾ ವನೆಯೂ ಸಲ್ಲಿಕೆಯಾಗಿದೆ. ಈ ಸಂಬಂಧ ಅಂತಿಮವಾಗಿ ಜಿಎಸ್‌ಟಿ ಮಂಡಳಿ ಸಭೆ ನಿರ್ಧಾರ ತೆಗೆದುಕೊಳ್ಳಲಿದೆ.

3 ಲಕ್ಷ ಕೋ.ರೂ.ಸಾಲ?
ಸಣ್ಣ ಉದ್ದಿಮೆಗಳ ಚೇತರಿಕೆಗೆ ಕೇಂದ್ರ 3 ಲಕ್ಷ ಕೋ.ರೂ. ಭದ್ರತಾ ಸಾಲ ಸೌಲಭ್ಯ ಕಲ್ಪಿಸಲು ಚಿಂತನೆ ನಡೆಸಿದೆ. ಬ್ಯಾಂಕ್‌, ಹಣಕಾಸು ಸಂಸ್ಥೆಗಳಿಂದ 3 ಲಕ್ಷ ಕೋಟಿ ರೂ. ಭದ್ರತೆ ಸಾಲ ಸವಲತ್ತು ಕಲ್ಪಿಸುವ ಪ್ರಸ್ತಾವನೆ, ಶೇ.20ರಷ್ಟು ಔಟ್‌ಸ್ಟಾಂಡಿಂಗ್‌ ಕ್ರೆಡಿಟ್‌ ಸೌಲಭ್ಯ ಕಲ್ಪಿಸುವ ಚಿಂತನೆ ಇದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next