Advertisement

ಶೂನ್ಯ ಬಡ್ಡಿದರದಲ್ಲಿ ಸಾಲ ಯೋಜನೆಗೆ ಚಿಂತನೆ

05:30 PM Jun 22, 2020 | Suhan S |

ಹಿರೇಕೆರೂರ: ರಾಜ್ಯದಲ್ಲಿ ಆಶಾಕಾರ್ಯಕರ್ತೆಯರಿಗೆ ಆರ್ಥಿಕ ಭದ್ರತೆ ನೀಡುವ ದೃಷ್ಟಿಯಿಂದ 10-12 ಜನರ ಸ್ವಸಹಾಯ ಸಂಘ ರಚಿಸಿ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವ ಯೋಜನೆ ರೂಪಿಸಲಾಗುವುದು ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ ತಿಳಿಸಿದರು.

Advertisement

ಇಲ್ಲಿನ ಪಟ್ಟಣದ ತರಳಬಾಳು ಸಾಂಸ್ಕೃತಿಕ ಭವನದಲ್ಲಿ ಹಿರೇಕೆರೂರ ಹಾಗೂ ರಟ್ಟಿಹಳ್ಳಿ ತಾಲೂಕುಗಳ ಸಹಕಾರಿ ಸಂಘಗಳ ವತಿಯಿಂದ ಕೋವಿಡ್ ವಾರಿಯರ್ಸ್‌ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ಚೆಕ್‌ ಹಾಗೂ ಸೀರೆಗಳ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಕೋವಿಡ್ ನಿಯಂತ್ರಣಕ್ಕೆ ಆಶಾ ಕಾರ್ಯಕರ್ತೆಯರು ವಾರದ 7 ದಿನ ಕೆಲಸ ನಿರ್ವಹಿಸಿ ಸಮುದಾಯದಲ್ಲಿ ಆರೋಗ್ಯದ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ರಾಜ್ಯದಲ್ಲಿನ ಸಹಕಾರಿ ಸಂಘಗಳಿಂದ 12.75 ಕೋಟಿ ರೂ. ಕ್ರೋಢೀಕರಿಸಿ 42 ಸಾವಿರ ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂ. ವಿತರಿಸಲಾಗುತ್ತಿದೆ. ಈಗಾಗಲೇ ನಾನು ರಾಜ್ಯದ 18 ಜಿಲ್ಲೆಗಳಿಗೆ ಪ್ರವಾಸ ಕೈಗೊಂಡು ಪ್ರೋತ್ಸಾಹ ಧನ ವಿತರಿಸುವ ಕಾರ್ಯ ಮಾಡಿದ್ದೇನೆ. ಸಹಕಾರಿ ರಂಗದಿಂದ ಸಿಎಂ ಕೋವಿಡ್‌ ಪರಿಹಾರ ನಿಧಿಗೆ52 ಕೋಟಿ ರೂ. ಸಂದಾಯ ಮಾಡಲಾಗಿದೆ ಎಂದರು.

ಪ್ರೋತ್ಸಾಹ ಧನ ಚೆಕ್‌ ಹಾಗೂಸೀರೆ ವಿತರಿಸಿ ಮಾತನಾಡಿದ ಕೃಷಿ ಸಚಿವ ಬಿ.ಸಿ. ಪಾಟೀಲ, ಇವರಿಗೆ ಜೀವನ ಭದ್ರತೆ ಕಲ್ಪಿಸಬೇಕು. ಕಾಯಂ ನೌಕರರನ್ನಾಗಿ ನೇಮಕ ಮಾಡಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪನವರಲ್ಲಿ ಮನವಿ ಮಾಡುತ್ತೇನೆ ಎಂದು ತಿಳಿಸಿದರು.

ರಾಜ್ಯ ಉಗ್ರಾಣ ನಿಗಮ ಅಧ್ಯಕ್ಷ ಯು.ಬಿ. ಬಣಕಾರ ಮಾತನಾಡಿದರು. ಇಫ್ಕೋ ಕಾರ್ಡೆಟ್‌ ನಿರ್ದೇಶಕ ಅಧ್ಯಕ್ಷತೆ ವಹಿಸಿದ್ದರು. ಟಿಎಪಿಸಿಎಂಎಸ್‌ ಅಧ್ಯಕ್ಷ ಎಸ್‌.ಎಸ್‌. ಪಾಟೀಲ, ಬಸವರಾಜ ಅರಬಗೊಂಡ, ಹನುಮಂತಗೌಡ ಭರಮಣ್ಣನವರ, ಲಿಂಗರಾಜ ಚಪ್ಪರದಳ್ಳಿ, ಜಗದೀಶ ತಂಬಾಕದ, ಎಸ್‌.ಬಿ. ತಿಪ್ಪಣ್ಣನವರ, ರಾಜು ಬಣಕಾರ, ನಾರಾಯಣಪ್ಪ ಗೌರಕ್ಕನವರ, ಜ್ಞಾನೇಶ ಅಬಲೂರು, ಗಣೇಶಗೌಡ ಪಾಟೀಲ, ಹಾಲನಗೌಡ ಮುದಿಗೌಡರ, ಡಿ.ಸಿ. ಪಾಟೀಲ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next