ಮುಂಬಯಿ: ‘ಬಿಜೆಪಿಯನ್ನು ಎದುರಿಸಲು ವಿರೋಧ ಪಕ್ಷಗಳು ಒಟ್ಟಾಗಬೇಕು’ ಎಂದು ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ ಬುಧವಾರ ಹೇಳಿಕೆ ನೀಡಿದ್ದಾರೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿದ ನಂತರ ಪವಾರ್ ಈ ಹೇಳಿಕೆ ನೀಡಿದ್ದಾರೆ.
ಹಿಂದಿನ ದಿನ ಶಿವಸೇನೆ ನಾಯಕರನ್ನು ಭೇಟಿ ಮಾಡಿದ ನಂತರ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಬುಧವಾರ ಪವಾರ್ ಅವರನ್ನು ಭೇಟಿ ಮಾಡಿದರು.
“ಬಿಜೆಪಿಯನ್ನು ವಿರೋಧಿಸುವ ಎಲ್ಲರಿಗೂ ನಮ್ಮೊಂದಿಗೆ ಸೇರಲು ಸ್ವಾಗತ. ಯಾರನ್ನೂ ಹೊರಗಿಡುವ ಪ್ರಶ್ನೆಯೇ ಇಲ್ಲ, ಕಾಂಗ್ರೆಸ್ ಇಲ್ಲದೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆಯೇ’ ಎಂದು ಪವಾರ್ ಪ್ರಶ್ನಿಸಿದರು.
“ನಾವು ಸದ್ಯದ ಪರಿಸ್ಥಿತಿ ಮತ್ತು ಎಲ್ಲಾ ಸಮಾನ ಮನಸ್ಕ ಪಕ್ಷಗಳು ಒಗ್ಗೂಡಿ ಬಿಜೆಪಿಗೆ ಬಲವಾದ ಪರ್ಯಾಯದ ಅಗತ್ಯ ಕುರಿತು ಚರ್ಚಿಸಿದ್ದೇವೆ” ಎಂದು ಪವಾರ್ ಹೇಳಿದರು.
‘ಈ ಹಂತದಲ್ಲಿ ನಾಯಕತ್ವವು ಸಮಸ್ಯೆಯಲ್ಲ. ಬಿಜೆಪಿ ವಿರುದ್ಧ ನಾವು ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗಿದೆ’ ಎಂದರು.
“ಯುಪಿಎ ಇಲ್ಲ”
‘ಪವಾರ್ ಅವರು ಕಾಂಗ್ರೆಸ್ ನೇತೃತ್ವದ ಯುಪಿಎ ಅಧ್ಯಕ್ಷರಾಗಲು ಬಯಸುತ್ತೀರಾ’ ಎಂದು ಕೇಳಿದಾಗ ಮಮತಾ ಬ್ಯಾನರ್ಜಿ, ಅವರು “ಈಗ ಯುಪಿಎ ಇಲ್ಲ” ಎಂದು ಉತ್ತರಿಸಿದರು.