Advertisement

ತಿರುಮಲೇಶ್‌, ಗಿರಡ್ಡಿಗೆ ಜೀವಮಾನ ಸಾಧನೆ ಪ್ರಶಸ್ತಿ

06:00 AM Apr 07, 2018 | |

ಶಿವಮೊಗ್ಗ: ಇಲ್ಲಿನ ಕರ್ನಾಟಕ ಸಂಘ ನೀಡುವ ಜೀವಮಾನ ಸಾಧನೆಯ ಪ್ರಶಸ್ತಿಗೆ ಈ ಬಾರಿ ಕಾವ್ಯ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿರುವ ಕೆ. ವಿ. ತಿರಮಲೇಶ್‌ ಹಾಗೂ ವಿಮರ್ಶಾ ಕೇತ್ರದಲ್ಲಿನ ಸಾಧನೆಗಾಗಿ ಗಿರಡ್ಡಿ ಗೋವಿಂದ ರಾಜ ಭಾಜನರಾಗಿದ್ದಾರೆ. ತಿರುಮಲೇಶ್‌ ಅವರಿಗೆ ಡಾ| ದ.  ರಾ. ಬೇಂದ್ರೆ ಪ್ರಶಸ್ತಿ ಹಾಗೂ ಗಿರಡ್ಡಿಯವರಿಗೆ ಪ್ರೊ| ತೀ. ನಂ. ಶ್ರೀಕಂಠಯ್ಯ ಹೆಸರಿನ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಏ. 7ರಂದು ಸಂಜೆ 5.30ಕ್ಕೆ ನಡೆಯುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ವಿಮರ್ಶಕ ಗಿರಡ್ಡಿ ಗೋವಿಂದ ರಾಜ ಅರವರಿಗೆ ವಿಮರ್ಶಾ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

Advertisement

ಧಾರವಾಡ ಕರ್ನಾಟಕ ವಿವಿ ಸಹಾಯಕ ಪ್ರಾಧ್ಯಾಪಕ ಡಾ| ವೆಂಕಟಗಿರಿ ದಳವಾಯಿ, ಗಿರಡ್ಡಿ ಕುರಿತು ಅಭಿನಂದನಾ ಭಾಷಣ ಮಾಡಲಿದ್ದಾರೆ. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ| ಡಿ.ಎಸ್‌. ಮಂಜುನಾಥ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಡಾ| ದ. ರಾ. ಬೇಂದ್ರೆ ಪ್ರಶಸ್ತಿ ಪುರಸ್ಕೃತರಾದ ಕೆ. ವಿ. ತಿರುಮಲೇಶ್‌ ಅವರಿಗೆ ಏ. 14ರಂದು ಹೈದರಾಬಾದ್‌ನ ಇಂಗ್ಲಿಷ್‌ ಮತ್ತು ವಿದೇಶಿ ಭಾಷೆಗಳ ವಿಶ್ವವಿದ್ಯಾಲಯದ ಸಮ್ಮೇಳನ ಸಭಾಂಗಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು ಎಂದು ಕರ್ನಾಟಕ ಸಂಘದ ಗೌರವ ಕಾರ್ಯದರ್ಶಿ ಡಾ| ಎಚ್‌. ಎಸ್‌. ನಾಗಭೂಷಣ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next