Advertisement

Thirthahalli ಕುಪ್ಪಳ್ಳಿ ; ಕಾರು ಅಪಘಾತ: ಚಾಲಕನಿಗೆ ಸಣ್ಣಪುಟ್ಟ ಗಾಯ

04:30 PM Nov 20, 2023 | Shreeram Nayak |

ತೀರ್ಥಹಳ್ಳಿ : ಅತೀ ವೇಗವಾಗಿ ಚಲಾಯಿಸಿದ ಕಾರು ಆಯತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಸಂಪೂರ್ಣ ಕಾರು ಜಖಂ ಆದ ಘಟನೆ ತಾಲೂಕಿನ ಕುಪ್ಪಳ್ಳಿ ಸಮೀಪ ಸೊಮವಾರ ನಡೆದಿದೆ.

Advertisement

ಕೊಪ್ಪದ ಸಿದ್ದರಮಠದ ಹೊಂಡಯ್ ಜಿ 20 ಕಾರು ತೀರ್ಥಹಳ್ಳಿ ಕಡೆ ಬರುತ್ತಿದ್ದ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ 169 ರಲ್ಲಿ ಕೊಪ್ಪ ತೀರ್ಥಹಳ್ಳಿ ನಡುವೆ ಕುಪ್ಪಳ್ಳಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಚರಂಡಿಗೆ ಬಿದ್ದಿದೆ.

ಕಾರಿನಲ್ಲಿ ಚಾಲಕ ಮಾತ್ರ ಇದ್ದು ಅವರಿಗೆ ಸಣ್ಣ ಪುಟ್ಟ ಗಾಯವಾಗಿದ್ದು ಅವರನ್ನು ಸಮೀಪದ ಗಡಿಕಲ್ಲು ಆಸ್ಪತ್ರೆಗೆ ಕರೆದೋಯ್ಯಲಾಗಿದೆ ಎಂದು ತಿಳಿದು ಬಂದಿದೆ.

 

Advertisement

Udayavani is now on Telegram. Click here to join our channel and stay updated with the latest news.

Next